ಪ್ರಿಯಾಂಕ ಗಾಂಧಿಗೆ ಕರ್ನಾಟಕ ಚುನಾವಣಾ ಜವಾಬ್ದಾರಿ...!

ಮುಂದಿನ ವರ್ಷ ಕರ್ನಾಟಕ, ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದ್ದು, ಈ ಎರಡು ರಾಜ್ಯಗಳ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಮಹತ್ವವಾಗಿದೆ. ಚುನಾವಣೆಯಲ್ಲಿ ಗೆಲುವು ಪಡೆಯುವ ದೃಷ್ಟಿಯಿಂದ ರಾಜಸ್ಥಾನ ಅಥವಾ ಕರ್ನಾಟಕ ಚುನಾವಣಾ ಜವಾಬ್ದಾರಿಯನ್ನು ಪ್ರಿಯಾಂಕ ಗಾಂಧಿ ಅವರಿಗೆ ವಹಿಸಲು ಪಕ್ಷದ ಹಿರಿಯ ನಾಯಕರು ಸಲಹೆ ನೀಡಿದ್ದಾರೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎಕೆ ಆ್ಯಂಟನಿ ಹಾಗೂ ಅಹ್ಮದ್ ಪಟೇಲ್ ಅವರು ಈ ವಿಚಾರವನ್ನು ಪಕ್ಷದ ಇತರೇ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಸಹ ಪ್ರಿಯಾಂಕ ಗಾಂಧಿ ಅವರಿಗೆ ನಾಯಕತ್ವವನ್ನು ವಹಿಸಲು ಪಕ್ಷದಲ್ಲಿಯೇ ಹಲವು ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡಿದ್ದರು. ಪ್ರಿಯಾಂಕ ಈಗಾಗಲೇ ಹಲವು ಚುನಾವಣೆಯಗಳಲ್ಲಿ ವಿಶೇಷವಾಗಿ, 2013ರ ಲೋಕಸಭಾ ಚುನಾವಣೆ ವೇಳೆ ಉತ್ತರಪ್ರದೇಶದಲ್ಲಿ ಸೋನಿಯಾ ಕ್ಷೇತ್ರವಾದ ರಾಯ್ ಬರೇಲಿ ಮತ್ತು ರಾಹುಲ್ ಗಾಂಧಿ ಅವರ ಅಮೇಥಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಆದರೆ ಪ್ರಿಯಾಂಕ ಗಾಂಧಿಗೆ ಮಣೆ ಹಾಕಿದರೆ ರಾಹುಲ್ ಗಾಂಧಿ ವರ್ಚಸ್ಸು ಕಡಿಮೆಯಾಗಲಿದೆ ಎನ್ನುವ ಮಾತುಗಳೂ ಕೇಳಿ ಬಂದ ಕಾರಣದಿಂದ ಇದು ಸಫಲವಾಗಿರಲಿಲ್ಲ.
ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಜೊತೆಗೆ ಮಾತುಕತೆ ನಡೆಸಿದ್ದ ಕರ್ನಾಟಕ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಪ್ರಿಯಾಂಕಾಗಾಂಧಿ ಅವರನ್ನು ಪ್ರಚಾರಕ್ಕೆ ಬಳಸಿಕೊಂಡರೆ ಪಕ್ಷಕ್ಕೆ ಆಗುವ ಅನುಕೂಲಗಳನ್ನು ಮನದಟ್ಟು ಮಾಡಿಕೊಟ್ಟಿದ್ದರು ಎನ್ನಲಾಗಿದೆ.
ಕೇಂದ್ರದಲ್ಲಿ ಎನ್‍ಡಿಎ ಸರ್ಕಾರದ ಆಳ್ವಿಕೆ ಬಂದ ಬಳಿಕ ಮೋದಿ- ಅಮಿತ್ ಶಾ ತಂತ್ರಗಾರಿಕೆಯಿಂದಾಗಿ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಾಗುತ್ತಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಹೀಗಾಗಿ ಪಕ್ಷದ ಹಿತ ದೃಷ್ಟಿಯಿಂದ ಹೊಸ ನಾಯಕರ ಆಯ್ಕೆ ಕುರಿತ ಚಿಂತನೆಗಳು ಹೆಚ್ಚಾಗಿವೆ. ರಾಹುಲ್ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತಿದಂತೆ ಪಕ್ಷದ ಹಲವು ಸ್ಥಾನಗಳಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಗಳಿದ್ದು, ಹೊಸ ನಾಯಕರು ಪಕ್ಷದ ಅಧಿಕಾರವನ್ನು ವಹಿಸುವ ಸಾಧ್ಯತೆಗಳಿವೆ. ಪ್ರಸ್ತುತ ರಾಹುಲ್ ಗಾಂಧಿ ವಹಿಸಿರುವ ಉಪಾಧ್ಯಕ್ಷ ಹುದ್ದೆಗೆ ಮನಮೋಹನ್ ಸಿಂಗ್ ಅಥವಾ ಎಕೆ ಆ್ಯಂಟನಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
2004ರಲ್ಲಿ ಸಂಸದರಾದ ಬಳಿಕ ರಾಹುಲ್ ಗಾಂಧಿ 2007ರಲ್ಲಿ ಎಐಸಿಸಿ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಇದಾದ ಬಳಿಕ 2013ರಲ್ಲಿ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಬಳಿಕ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಈ ಹಿಂದೆ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ರಾಹುಲ್ ಗಾಂಧಿಗೆ ನೀಡುವ ಕುರಿತು ಸಹ ಅಪಸ್ವರ ಕೇಳಿಬಂದಿತ್ತು. 

ಚೀನಾ ವಿರುದ್ದ ನಿಲ್ಲಬಲ್ಲ ಏಕೈಕ ವಿಶ್ವ ನಾಯಕ ಪ್ರಧಾನಿ ಮೋದಿ ಮಾತ್ರ :ಮೈಕಲ್ ಪಿಲ್ಸ್ಬರ್

ವಾಷಿಂಗ್ಟನ್
: ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಮತ್ತು ಅವರ ಮಹತ್ವಾಕಾಂಕ್ಷೆಯ ಯೋಜನೆಯ ವಿರುದ್ಧ ಮೋದಿ ಮತ್ತು ಅವರ ತಂಡ ಬಹಿರಂಗವಾಗಿ ಮಾತನಾಡಿದೆ ಎಂದು ಅಮೆರಿಕಾ ಕಾಂಗ್ರೆಸ್ಸಿನ ವಿಚಾರಣೆಯ ಸಂದರ್ಭದಲ್ಲಿ, ಪ್ರತಿಷ್ಠಿತ ಟಿಂಕ್ ಟ್ಯಾಂಕ್ ನಿರ್ದೇಶಕ ಮೈಕೆಲ್ ಪಿಲ್ಸ್ಬರಿ ಹೇಳಿದ್ದಾರೆ.
ಚೀನಾದ ಒನ್ ಬೆಲ್ಟ್ ಒನ್ ರೋಡ್ (OBOR) ಯೋಜನೆ ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾದು ಹೊಗಿದ್ದು ಚೀನಾದ ಈ ಯೋಜನೆಯನ್ನು ಭಾರತ ಪ್ರಪ್ರಥಮವಾಗಿ ಬಹಿರಂಗವಾಗಿ ತಿರಸ್ಕರಿಸಿದೆ. ಚೀನಾದ ಈ ಮಹತ್ವಾಕಾಂಕ್ಷಿ ಯೋಜನೆ ಸಾಕಾರಗೊಳ್ಳಲು ವಿಶ್ವ ದಲ್ಲೇ ಅತೀ ವೇಗ‌ವಾಗಿ ಬೆಳೆಯುತ್ತಿರುವ ಭಾರತದ ಸಹಕಾರ ಅತ್ಯಗತ್ಯವಾಗಿದೆ.
ಚೀನಾದ ಈ ಯೋಜನೆಯನ್ನು ಬಹಿರಂಗವಾಗಿ ತಿರಸ್ಕರಿಸಿದ “ವಿಶ್ವದ ಏಕೈಕ ನಾಯಕ !! ಹೌದು ಅದು ಪ್ರಧಾನಿ ನರೇಂದ್ರ ಮೋದಿ …ಅವರು ಮತ್ತು ಅವರ ತಂಡ ಬಹಿರಂಗವಾಗಿ ಇದರ ಬಗ್ಗೆ ಮಾತನಾಡುತ್ತಿದ್ದಾರೆ ‌‌. ಭಾಗಶಃ ಏಕೆಂದರೆ ಚೀನಾದ ಬೆಲ್ಟ್ ಮತ್ತು ರೋಡ್ ಯೋಜನೆ ಭಾರತೀಯ ಸಾರ್ವಭೌಮ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪಿಲ್ಸ್ಬರಿ ಹೇಳಿದರು.
” ಅಮೆರಿಕಾ ಸರಕಾರ, ಈ ಮೊದಲು ಚೀನಾದ ಯೋಜನೆಗೆ ಸಹಕಾರ ನೀಡುವುದಾಗಿ ತಿಳಿಸಿತ್ತು ಆದರೆ ಇದೀಗ ತಟಸ್ಥವಾಗಿದೆ ಎಂದು ಕೂಡ ಅವರು ಹೇಳಿದರು.
ತದನಂತರ ‌ತನ್ನ ಹೊಸ ಇಂಡೋ-ಪೆಸಿಫಿಕ್ ಕಾರ್ಯತಂತ್ರಕ್ಕಾಗಿ ಟ್ರಂಪ್ ಆಡಳಿತವನ್ನು ಶ್ಲಾಘಿಸುತ್ತಾ ಟ್ರಂಪ್ ಆಡಳಿತದ “ಮುಕ್ತ ಮತ್ತು ತೆರೆದ” ಇಂಡೋ-ಪೆಸಿಫಿಕ್ ನೀತಿಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಚೀನಾ ಈಗಾಗಲೇ ಭಾರತದ ಮಹತ್ವವನ್ನು ಅರಿತೊಕೊಂಡಿದೆ ಆದರೆ ಅದನ್ನು ಅವರು ಇಷ್ಟಪಡುವುದಿಲ್ಲ ಎಂದು ಚೀನಾ ಸಂಬಂಧಿತ ವಿಷಯಗಳ ತಜ್ಞ ಮತ್ತು ಅಮೆರಿಕಾದ ರಕ್ಷಣಾ ಅಧಿಕಾರಿ ಪಿಲ್ಸ್ಬರಿ ಹೇಳಿದರು.
“ಹಿಂದೂ ಮಹಾಸಾಗರವನ್ನು ಭಾರತ ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವುದು ರಕ್ಷಣಾತ್ಮಕವಾಗಿ ಭಾರತಕ್ಕೆ ಅತ್ಯಗತ್ಯವಾಗಿದ್ದು ಇದಕ್ಕಾಗಿ ಅಮೆರಿಕಾದ ಪಿಎ ಯುದ್ದ ವಿಮಾನವನ್ನು ಹಲವಾರು ಶತಕೋಟಿ ಡಾಲರ್ ವೆಚ್ಚದಲ್ಲಿ ಖರೀದಿಸಿದೆ. ಇದು ಹಿಂದೂ ಮಹಾಸಾಗರ ದಲ್ಲಿ ಪ್ರಸ್ತುತ ಸನ್ನಿವೇಶ ವನ್ನು ಟ್ರ್ಯಾಕ್ ಮಾಡಲು ಭಾರತಕ್ಕೆ ಭಾರಿ ಪ್ರಮಾಣದಲ್ಲಿ ಸಹಾಯವಾಗಲಿದೆ. ” ಎಂದು ಅವರು ಹೇಳಿದರು
” ಭಾರತದೊಂದಿಗಿನ ವ್ಯಾಪಕ ಸಹಕಾರಕ್ಕಾಗಿ ಚೀನಾ ಈ ಮೊದಲು ಒಬಾಮಾ ಸರ್ಕಾರವನ್ನು ಕೂಡ ತಿರಸ್ಕರಿಸಿತ್ತು ಆದರೆ ಭಾರತ ಅತ್ಯಂತ ಪ್ರಭಾವಶಾಲಿ ರಾಷ್ಟ್ರ ವಾಗಿ ಬೆಳೆಯುತ್ತಿರುವುದನ್ನು ಚೀನಾ ಒಪ್ಪಿಕೊಳ್ಳಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಅಮೆರಿಕಾದ ವಿಶ್ಲೇಷಕ ಉತ್ತರಿಸಿದರು.
ಚೀನಾ ತನ್ನ ಈ ಮಹತ್ವಾಕಾಂಕ್ಷಿ ಯೋಜನೆಗೆ ನೆರೆ ರಾಷ್ಟ್ರಗಳನ್ನು ಸಹಿ ಹಾಕಿಸುವ ಮೂಲಕ ಏಷ್ಯಾದಲ್ಲಿ ಅನಿಯಂತ್ರಿತ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುವ ಉದ್ದೇಶ ಮತ್ತು ಒತ್ತಾಸೆಯನ್ನು ಹೊಂದಿದೆ ಇದಕ್ಕೆ ಪ್ರಮುಖ ಕಾರಣ ಚೀನಾದ ಹಲವು ನೆರೆಹೊರೆಯ ರಾಷ್ಟ್ರಗಳು ಸಾಲ ಮರು ಪಾವತಿ ಮಾಡಲು ವಿಫಲವಾಗಿರುವುದು” ಎಂದು ಮೈಕೆಲ್ ಮಾರ್ಕ್ ಅಭಿಪ್ರಾಯ ಪಟ್ಟಿದ್ದಾರೆ.
ಚೀನಾದ ಪರಿಣತಿ ಮತ್ತು ಬಂಡವಾಳದ ವಿಸ್ತಾರವಾದ ಬಾಂಧವ್ಯವನ್ನು ವಿಶ್ವದ ವಿವಿಧ ಭಾಗಗಳಿಗೆ ವಿಸ್ತರಿಸಲು ಬೆಲ್ಟ್ ಮತ್ತು ರೋಡ್ ಯೋಜನೆ ಉದ್ದೇಶಿಸಿದೆ. ಆದರೆ ಪಾಕಿಸ್ತಾನ-ಆಕ್ರಮಿತ-ಕಾಶ್ಮೀರದಲ್ಲಿ (ಪಿಒಕೆ) ಇದು ಹಾದುಹೋಗುವುದರಿಂದ ಭಾರತ ಈ ಯೋಜನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.
ಇದಕ್ಕೆ ಪ್ರತಿಯಾಗಿ ಈ ವರ್ಷದ ಮೇ ತಿಂಗಳಲ್ಲಿ ಚೀನಾ ಆಯೋಜಿಸಿದ್ದ ಬೆಲ್ಟ್ ಅಂಡ್ ರೋಡ್ ಫೋರಮ್ (BRF) ಅನ್ನು ಭಾರತ ಬಹಿಷ್ಕರಿಸಿತ್ತು.
ಅಮೇರಿಕಾದ ಕಂಪನಿಗಳು ಆಸ್ತಿ ಕಳ್ಳತನದ (Intellectual Property) ಅಪಾಯವನ್ನು ಎದುರಿಸುತ್ತಿದ್ದು, ಉನ್ನತ ತಂತ್ರಜ್ಞಾನದ ಸಂಶೋಧನೆ ಮತ್ತು ಸೂಕ್ಷ್ಮ ವ್ಯಾಪಾರ ರಹಸ್ಯಗಳನ್ನು ಚೀನಾ ಕದಿಯುತ್ತಿದೆ.
ರಾಜ್ಯ-ಬೆಂಬಲಿತ ಸಂಸ್ಥೆಗಳೊಂದಿಗೆ ಪೈಪೋಟಿ ಮಾಡಲಾಗದ ಚೀನಾ ಇಂತಹ ಕೆಲಸಕ್ಕೆ ಕೈ ಹಾಕಿದೆ ಎಂದು ಅವರು ಆರೋಪಿಸಿದ್ದಾರೆ.
ಕಡಿಮೆ ಬಡ್ಡಿದರದ ನೆಪದಲ್ಲಿ ಸಾಲ ಮರುಪಾವತಿ ಮಾಡಲಾಗದ ದೇಶಕ್ಕೆ ಚೀನಾ ಸಾಲ ನೀಡುತ್ತಿದೆ ಎಂದ ಅವರು ಶ್ರೀಲಂಕಾ ವನ್ನು ಉಲ್ಲೇಖಿಸಿದರು.

ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರ ಕಾಯ್ದೆಯ ಪ್ರಮುಖ ಅಂಶಗಳು.

1) ಖಾಸಗಿ ಆಸ್ಪತ್ರೆಗಳಲ್ಲಿ ದೊರಕುವ ಚಿಕಿತ್ಸೆಗೆ ಬೇಕಾಬಿಟ್ಟಿ ದರ ವಿದಿಸಿ ಬಡವ ಶ್ರೀಮಂತರೆನ್ನದೆ ಹಣ ಕೀಳುವ ಆಸ್ಪತ್ರೆಗಳು ಇನ್ನ ಮುಂದೆ ಯಾವ ಚಿಕಿತ್ಸಗೆ ಯಾವ ದರ ಅಂತ ಸರ್ಕಾರ ನಿಗದಿಪಡಿಸಿದ ದರ ಆಸ್ಪತ್ರೆಗಳ ರಿಸೆಪಷನ್ ಹಾಲ್ನಲ್ಲಿ ಹಾಕಬೇಕು.


2) ಯಲ್ಲಾ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ಏಕ ರೂಪದ ಚಿಕಿತ್ಸ ದರ ಅನುಸರಿಸಬೇಕು.
3) ರೋಗಿಗೆ ತಾನು ಪಡೆಯಲು ಬಯಸುವ ಚಿಕಿತ್ಸೆಯ ಸಂಪೂರ್ಣ ಚಿಕಿತ್ಸೆಯ ಮುನ್ನ ಬೆಡ್ ಚಾರ್ಜ್,ಚಿಕಿತ್ಸೆಯ ವೆಚ್ಚ ಹಾಗು ಔಷದಿಯ ವೆಚ್ಚದ ಎಸ್ಟಿಮೇಟ್ ಕಾಪೀ ನೀಡಬೇಕು.
4) ಎಮರ್ಜೆನ್ಸಿ ವೇಳೆ ಹಣ ಪಾವತಿಗೆ ಒತ್ತಾಯಿಸುವಂತಿಲ್ಲ.
5)
ವೈದ್ಯರು ಇನ್ನ ಮುಂದೆ ರೋಗಿಗೆ ಬರೆಯುವ ಔಷದಿಗಳ ಹೆಸರನ್ನು ಹಾಗು ಚಿಕಿತ್ಸೆ ಕೊಡುತ್ತಿರುವ ವಿಷಯದ ಕುರಿತು ರೋಗಿಗೆ ಅರ್ಥವಾಗುವ ಹಾಗೆ ಬರೆಯಬೇಕು.
6)
ರೋಗಿಯು ಚಿಕಿತ್ಸೆ ಫಲಕಾರಿಯಾಗದೆ ಮರಣಹೊಂದಿದ ಸಂದರ್ಭದಲ್ಲಿ ಬಿಲ್ ಪಾವತಿಗಾಗಿ ಸಂಭದಿಕರಿಗೆ ಹಿಂಸಿಸಬಾರದು ಹಾಗು ಬಿಲ್ ಪಾವತಿಯಾಗದೆ ಶವ ಕೊಡದೆ ನಿರಾಕರಿಸುವಂತಿಲ್ಲ.
7) ರೋಗಿಯ ಖಾಸಗಿತನ ಕಾಪಡಾಬೇಕು .
8)
ವೈದ್ಯರು ಯಾವ ನಿರ್ದಾರಕ್ಕು ಮುನ್ನ ರೋಗಿಯ ಸಂಬಂದಿಕರ ಒಪ್ಪಿಗೆ ಪಡೆಯಬೇಕು.
9) ಇನ್ನ ಮುಂದೆ ಪ್ರಾರಂಭವಾಗುವ ಖಾಸಗಿ ಲ್ಯಾಬ್ ಗಳು ಸರ್ಕಾರಿ ಆಸ್ಪತ್ರೆಯಿಂದ 200 ಮಿಟರ್ ದೂರದಲ್ಲಿ ಇರಬೇಕು.


ಖಾಸಗಿ ಆಸ್ಪತ್ರೆಗಳು ಬಡವ ಶ್ರೀಮಂತರೆನ್ನದೆ ರೋಗಿಗಳಿಂದ ಹಣ ಕೀಳವ ದಂಧೆ ನೆಡೆಸುತ್ತಿರುವ ಈ ಸಂದರ್ಭದಲ್ಲಿ ಅವರ ಹೆಡೆಮುರಿ ಕಟ್ಟಲು ನಮ್ಮ ಜನ ಪರ ಆರೊಗ್ಯ ಮಂತ್ರಿಗಳಾದ ರಮೇಶ್ ಕುಮಾರ ರವರು ತರಲು ಹೊರಟಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರ ಕಾಯ್ದೆ ಯನ್ನು ನಾನು ಬೆಂಬಲಿಸುತ್ತೆನೆ ಹಾಗು ರಾಜ್ಯದ ಯಲ್ಲ ವರ್ಗದ ಜನರು ಈ ಆಸ್ಪತ್ರೆಗಳ ತೊಂದರೆಗೆ ಒಳಾಗಾಗಿದ್ದು

ಒಬ್ಬ ಸಂಸದರಿಗಿದ್ದಾಗಲೂ ಸಹ ಇವತ್ತಿಗಿದ್ದಾಗಲೂ ‘ಸಮಾಜ’ ಎಂಬುವುದಕ್ಕಾಗಿ ದುಡಿಯುತ್ತಿರುವಾಗ ಎಲ್ಲವನ್ನೂ ನಿಭಾಯಿಸುವುದು ಸುಲಭವಲ್ಲ!

ಇನ್ನೂ ಅಚ್ಚರಿಯೆಂದರೆ, ಕಳೆದ ಚುನಾವಣೆಯ 19 ಲಕ್ಷ ಸಾಲ ಇನ್ನೂ ಹಾಗೇ ಇದೆ! ಕ್ರೆಡಿಟ್ ಕಾರ್ಡಿನದು 2,90,000 ರೂ ಹಾಗೇ ಇದೆ! ಸಂಸದರ ಅನುದಾನ ವರ್ಷಕ್ಕೆ ಕೇವಲ 5 ಕೋಟಿಯಾದರೂ ಸಹ, ಒಂದೂ ರೂಪಾಯಿಗಳನ್ನೂ ಸ್ವಂತಕ್ಕೋಸ್ಕರ ಖರ್ಚು ಮಾಡಿಲ್ಲ ಪ್ರತಾಪ್ ಸಿಂಹ ಎಂದರೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ!ಮನೆಗೆ ಬಂದು ಹೋಗುವವರಿಂದ ಹಿಡಿದು ಸಹಾಯ ಹಸ್ತ ಯಾಚಿಸಿ ಬರುವ ಪ್ರತಿಯೊಬ್ಬರಿಗೂ ಪ್ರತಾಪ್ ಸಿಂಹರಿಂದ ‘ಇಲ್ಲ’ ಎಂಬ ಉತ್ತರ ಬರುವುದಿಲ್ಲ! ನೀವೇಯೋಚಿಸಿ

ಇಷ್ಟಕ್ಕೂ ಪ್ರತಾಪ್ ಸಿಂಹರವರು ಸಂಸದರಾದ ಮೇಲೆ ಮೈಸೂರಿಗೆ ಮಾಡಿದ್ದೇನು ಗೊತ್ತೇ?!ಪ್ರತಾಪ್ ಸಿಂಹ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ಹಿಂದಿನ ದಿನವಷ್ಟೇ ಒಬ್ಬ ರೈತ ತಂಬಾಕು ಲೈಸೆನ್ಸ್ ನನ್ನು ನವೀಕರಣ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಾಗ, ನಿರ್ದಿಷ್ಟ ಪ್ರಮಾಣದ ತಂಬಾಕನ್ನು ಬೆಳೆದಿಲ್ಲದ ಕಾರಣಕ್ಕೆ ಹುಣಸೂರು, ಪಿರಿಯಾಪಟ್ಟಣ, ಹೆಚ್ ಡಿ ಕೋಟೆಯ ಸುಮಾರು ನಾಲ್ಕು ಸಾವಿರ ಕ್ಕೂ ಹೆಚ್ಚು ಲೈಸೆನ್ಸ್ ಗಳನ್ನು ನವೀಕರಣ ಮಾಡದಿರುವುದು ಗೊತ್ತಾದಾಗ, ಕೇಂದ್ರ ವಾಣಿಜ್ಯ ಸಚಿವೆಯಾಗಿದ್ದ

ನಿರ್ಮಲಾ ಸೀತಾರಾಮನ್ ಹಾಗು ತಂಬಾಕು ಮಂಡಳಿಯ ಅಧ್ಯಕ್ಷರ ಜೊತೆ ಚರ್ಚಿಸಿ ಒಂದೇ ದಿನದಲ್ಲಿ ಪ್ರತಿ ರೈತರ ಲೈಸೆನ್ಸ್ ಗಳನ್ನೂ ನವೀಕರಿಸುವುದಕ್ಕೆ ಅವಕಾಶ ಮಾಡಿಕೊಟ್ಟದ್ದು ಇದೇ ಪ್ರತಾಪ್ ಸಿಂಹ!ಲೈಸೆನ್ಸ್ ನವೀಕರಣ ಮಾಡಿಕೊಟ್ಟಾಗ ರಸಗೊಬ್ಬರದ ಅನಿವಾರ್ಯ ಹೆಚ್ಚಾಯಿತು! ಕೊನೆಗೆ, ಕೇಂದ್ರ ರಸಗೊಬ್ಬರ ಸಚಿವರಾದ ಶ್ರೀ ಅನಂತ ಕುಮಾರ್ ಹೆಗಡೆಯವರ ಜೊತೆ ಚರ್ಚಿಸಿ 2,850 ಟನ್ ಹೆಚ್ಚುವರಿ ಗೊಬ್ಬರ ಪೂರೈಕೆ ಮಾಡಿಸಿದ್ದು ಇದೇ ಸಿಂಹ!: ಪ್ರತಾಪ್ ಸಿಂಹ ಸಂಸದರಾದ ನಂತರ ಕಾಫಿ ಬೆಳೆಗಾರರಿಗೆ 12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಕಾಫಿ ಬೆಳೆಗಾರರಿಗೆ 950 ಕೋಟಿ ರೂಗಳ ಪ್ಯಾಕೇಜ್ ಘೋಷಣೆಯಾಯಿತು! ತದನಂತರವೇ, ಕಾಫಿ ಬೆಳೆ ಮೈಸೂರು ವಿಭಾಗದಲ್ಲಿ ಅಭಿವೃದ್ದಿಯಾಯಿತು ರಸ್ತೆ ಕಾಮಗಾರಿ ಹಾಗೂ ನವೀಕರಣದಲ್ಲಿ ಮೈಸೂರು ಕಂಡಷ್ಟು ಅಭಿವೃದ್ದಿ ಸ್ವತಃ ಬೆಂಗಳೂರು ಸಹ ಕಂಡಿಲ್ಲ!


ಬೆಂಗಳೂರು, ಮೈಸೂರು ಮತ್ತು ದಕ್ಷಿಣ ಕನ್ನಡದ ಬಂಟ್ವಾಳವನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿ 275 ಪುತ್ತೂರು, ಸುಳ್ಯ, ಮಡಿಕೇರಿ, ಪಿರಿಯಾಪಟ್ಟಣ, ಮೈಸೂರು, ಶ್ರೀರಂಗಪಟ್ಟಣ, ಮಂಡ್ಯ, ರಾಮನಗರಗಳನ್ನು ಜೋಡಿಸುತ್ತದೆ. ಮೈಸೂರು ನಗರದ ಹೊರವಲಯದಲ್ಲಿ ಹಾದುಹೋಗುವ ಈ ಹೆದ್ದಾರಿ, ಹಿನಕಲ್ ಜಂಕ್ಷನ್ ನಿಂದ ಇಲವಾಲ ಆರ್‍ಎಂಪಿ ಕ್ವಾಟ್ರಸ್ ವರೆಗಿನ 12 ಕಿ.ಮೀ ರಸ್ತೆಯ ನವೀಕರಣ ಕಾಮಗಾರಿ ರೂ. 8 ಕೋಟಿ ವೆಚ್ಚದಲ್ಲಿ 2015 ರಲ್ಲಿ


ಚಾಲನೆಗೊಂಡಿದೆ. ಕಾಮಗಾರಿ ಆರಂಭವಾದ ಮೂರು ತಿಂಗಳೊಳಗೆ ಕಾಮಗಾರಿ ಮುಗಿಸಲು ಗಡುವು ನೀಡಲಾಗಿತ್ತು.: ಅದಲ್ಲದೇ, 2016 – 2017 ರ ಸಾಲಿನ ಕೇಂದ್ರ ರಸ್ತೆ ಅನುದಾನದಡಿ ಮೈಸೂರು ಜಿಲ್ಲೆಗೆ 282 ಕೋಟಿ ಅನುದಾನ ಹಾಗೂ ಕೊಡಗು ಜಿಲ್ಲೆಗೆ 28 ಕೋಟಿ ರೂ ಗಳ ಅನುದಾನವನ್ನು ಬಿಡುಗಡೆ ಮಾಡಿದೆ! ಕಾಮಗಾರಿ ಪ್ರಗತಿಯಲ್ಲಿದ್ದರೂ ಸಹ ಸ್ವತಃ ಪ್ರತಾಪ್ ಸಿಂಹರವರೇ ಕೆಲಸದ ಪ್ರತಿ ವಿವರಗಳನ್ನೂ ತೆಗೆದುಕೊಳ್ಳುತ್ತಾರೆ.


ಮೊದಲ ಬಜೆಟ್ ನಲ್ಲಿಯೇ ಮೈಸೂರಿಗೆ ಟೆಕ್ಸ್ಟ್ ಟೈಲ್ ಕ್ಲಸ್ಟರ್ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಕೇಂದ್ರ ವಿತ್ತ ಸಚಿವರಾದ ಅರುಣ್ ಜೇಟ್ಲಿ 200 ಕೋಟಿ ರೂ ಅನುದಾನ ನೀಡಿದ್ದಾರೆ ಮೈಸೂರಿನಲ್ಲಿ ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರ ಸ್ಥಾಪನೆಯಾಗಿದ್ದು ಕೂಡ ಪ್ರತಾಪ್ ಸಿಂಹರವರ ಒತ್ತಾಸೆಯಿಂದಲೇ! ನೆನಪಿರಲಿ, ಮೈಸೂರಿನ ಕಡೆಯವರೇ ಆದ ಎಸ್ ಎಮ್ ಕೃಷ್ಣ ರವರು ಈ ಹಿಂದೆ ವಿದೇಶಾಂಗ ಸಚಿವರಾಗಿದ್ದಾಗಲೂ ಈ ಕೆಲಸವಾಗಿರಲಿಲ್ಲ!


137 ಕೋಟಿ ರೂ ವೆಚ್ಚದಲ್ಲಿ ಮೈಸೂರಿನ ಅಖಿಲ ಭಾರತ ಶ್ರವಣ ಹಾಗೂ ವಾಕ್ ಸಂಸ್ಥೆಯ ಸಂಶೋಧನಾ ಕೇಂದ್ರಕ್ಕೆ ಎರಡು ವರ್ಷಗಳ ಹಿಂದಷ್ಟೇ ಶಂಕು ಸ್ಥಾಪನೆಯಾಗಿದೆ! ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರ–ಮಡಿಕೇರಿ ಮಾರ್ಗದ ಸರ್ವೇ ಕಾರ್ಯ ತ್ವರಿತಗತಿಯಲ್ಲಿ ನಡೆಯಲು ಕೇಂದ್ರಕ್ಕೆ ಒತ್ತಡ ತಂದ ಮೇಲೆ ಕೇಂದ್ರ ಸರಕಾರ ತಕ್ಷಣವೇ ಸರ್ವೇ ಮಾಡಲು ಭರವಸೆ ನೀಡಿತು.ರೈಲ್ವೇ ಕ್ಷೇತ್ರದಲ್ಲಿ ಪ್ರತಾಪ್ ಸಿಂಹರವರ ಸಾಧನೆ ಅದ್ವಿತೀಯ!


ಹಳೇ ಮೈಸೂರು ಭಾಗದಿಂದ ಮೈಸೂರು – ವಾರಣಾಸಿ ರೈಲು ಸಂಚಾರವನ್ನು ವಾರಕ್ಕೆ ಎರಡು ದಿನ ಸಂಚರಿಸುವ ಹೊಸ ರೈಲನ್ನು ಮಂಜೂರು ಮಾಡಿದ್ದರಿಂದ ದಕ್ಷಿಣ ಕರ್ನಾಟಕದ ತೀರ್ಥಯಾತ್ರಿಗಳಿಗೆ ಅನುಕೂಲವಾಗುವಂತಾಗಿದ್ದು ಇದೇ ಪ್ರತಾಪ್ ಸಿಂಹರಿಂದ!ಮೈಸೂರು –ಹೌರಾ ಹೈಸ್ಪೀಡ್ ರೈಲನ್ನು ವಾರದಲ್ಲಿ ಎರಡು ಬಾರಿ ರೈಲು ಸಂಚರಿಸುವಂತೆ ಒತ್ತಡ ತಂದಿದ್ದು ಇದೇ ಸಿಂಹ!ಮೈಸೂರು ರೈಲ್ವೇ ನಿಲ್ದಾಣದ ಎರಡನೆಯ ಪ್ರವೇಶ ದ್ವಾರದ ಪಾರ್ಕಿಂಗ್ ಜಾಗದ ಅಗಲೀಕರಣ ರೂ. 18.44 ಲಕ್ಷದಲ್ಲಿ, ಇ-ಶೌಚಾಲಯಗಳ ನಿರ್ಮಾಣ, ಮಹಿಳಾ ಶೌಚಾಲಯಗಳ ನಿರ್ಮಾಣ ಮತ್ತು ಸ್ಯಾನಿಟರಿ ನ್ಯಾಪ್‍ಕಿನ್ ಯಂತ್ರಗಳ ಅಳವಡಿಕೆ ರೂ. 15.00 ಲಕ್ಷ ವೆಚ್ಚದಲ್ಲಿ, ಪ್ರಯಾಣಿಕರ ಮೂಲಭೂತ ಸೌಲಭ್ಯಗಳಿಗೆ ರೂ. 7.00 ಲಕ್ಷ ವೆಚ್ಚ.ಮಾಡಿದಪ್ರತಾಪ್ ಸಿಂಹ ಮೈಸೂರಿನ ದಿಕ್ಕನ್ನೇ ಬದಲಿಸಿದ್ದು ಸುಳ್ಳಲ್ಲ.ರೂ. 3.11 ಲಕ್ಷ ವೆಚ್ಚದಲ್ಲಿ ಎಂಎಫ್‍ಸಿ ಕಟ್ಟಡ ಆವರಣದಲ್ಲಿ ಉದ್ಯಾನವನ ನಿರ್ಮಾಣವಾಯಿತು! ಚಾಮರಾಜಪುರಂ ರೈಲ್ವೇ ನಿಲ್ದಾಣದಲ್ಲಿ ರೂ. 37.40 ಲಕ್ಷ ವೆಚ್ಚದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ವಿಶಾಲ ಮತ್ತು ಸುಸಜ್ಜಿತ ತಂಗುದಾಣವನ್ನುನಿರ್ಮಿಸಿದರು! ಒಟ್ಟು 80.95 ರೂ. ಲಕ್ಷ ವೆಚ್ಚದಲ್ಲಿ ರೈಲ್ವೇ ನಿಲ್ದಾಣ ಮೂಲ ಸೌಲಭ್ಯ ಮೇಲ್ದರ್ಜೆಗೇರಿಸಲು ಕ್ರಮ ತೆಗೆದುಕೊಂಡಪ್ರತಾಪ್ ಸಿಂಹ ಯುರೋಪ್ ರೈಲ್ವೇ ನಿಲ್ದಾಣಗಳ ರೀತಿಯನ್ನು ಅಳವಡಿಸಲು, ಮೈಸೂರು ನಗರದ ಮುಖ್ಯ ರೈಲ್ವೆ ನಿಲ್ದಾಣ ಹಾಗೂ ಚಾಮರಾಜಪುರಂ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೂಲಭೂತ ಸೌಕರ್ಯ ಕಲ್ಪಿಸಲು ರೂ. 8.94 ಲಕ್ಷಗಳನ್ನು ಮಂಜೂರು ಮಾಡಿದ್ದು ಇದೇ ಪ್ರತಾಪ್ ಸಿಂಹ!


ಕಾಫಿ, ಕರಿಮೆಣಸು ಹಾಗು ಸಾಂಬಾರು ಪದಾರ್ಥಗಳ ಬೆಳೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಪ್ರತಾಪ್ ಸಿಂಹರಿಗೆ ಮೈಸೂರನ್ನು ಯಾವ ರೀತಿಯಾಗಿ ಅಭಿವೃದ್ಧಿಗೊಳಿಸಬೇಕೆಂಬ ಸ್ಪಷ್ಟ ಚಿತ್ರಣವಿದೆ! ಕರ್ನಾಟಕದಲ್ಲಿಯೇ ಕೇಂದ್ರ ಸರಕಾರದ ಅನುದಾನಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡ ಎರಡನೇ ಸಂಸದ ಪ್ರತಾಪ್ ಸಿಂಹ!
ಮೊನ್ನೆಯಷ್ಟೇ ಮೈಸೂರಿನಲ್ಲಿ ಡಿಸಿ ಕಚೇರಿ ನಿರ್ಮಾಣಕ್ಕಾಗಿ 15 ಎಕರೆ ಜಾಗ ಮಂಜೂರು ಮಾಡಿದ್ದಾರೆ!

ಇದಲ್ಲದೇ, ಮೈಸೂರಿನ ಮುಖ್ಯ ನಿಲ್ದಾಣದಲ್ಲಿ ಅಂಧರಿಗೆ ಅನುಕೂಲಾವಗುವ ಹಾಗೆ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ‘ಬ್ರೈಲ್ ಲಿಪಿಯಿರುವ ಸೂಚನಾ ಫಲಕಗಳನ್ನು’ ಅಳವಡಿಸಲಾಗಿದೆ!ಮೈಸೂರಿನಲ್ಲೊಂದರಲ್ಲಿಯೇ ಪ್ರಧಾನಿಯ ಜನೌಷಧ ಭಾರತೀಯ ಕೇಂದ್ರ ಒಟ್ಟಾರೆಯಾಗಿ 17 ಇವೆ! ಬೆಂಗಳೂರಿನಲ್ಲಿಯೂ ಸಹ ಇಷ್ಟು ದೊಡ್ಡ ಮತ್ತದಲ್ಲಿ ಕೇಂದ್ರಗಳಿಲ್ಲ.


: PM Reliefe fund ನ್ನು ಅತೀ ಹೆಚ್ಚಾಗಿ ಸಮರ್ಥವಾಗಿ ಬಳಸಿಕೊಂಡು, ಹಿಂದುಳಿದ ವರ್ಗಗಳ ಮಾರಣಾಂತಿಕ ಖಾಯಿಲೆಗೆ ಒಳಗಾಗಿರುವ ವೃದ್ಧರಿಗೆ ಸಮರ್ಥವಾಗಿ ವೈದ್ಯಕೀಯ ಸೇವೆಯನ್ನು ನೀಡಿದ ಸಂಸದ ಪ್ರತಾಪ್ ಸಿಂಹ!: ಕೆ.ಆರ್. ಆಸ್ಪತ್ರೆಯಲ್ಲಿ ಅಗತ್ಯವಿದ್ದ 1 ಕೋಟಿ 20 ಲಕ್ಷ ಮೊತ್ತದ ಯಂತ್ರೋಪಕರಣದ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದು ಇದೇ ಪ್ರತಾಪ್ ಸಿಂಹ!!: 


ಸಂಸದರ ಅನುದಾನದಲ್ಲಿ ರೈಲ್ವೇ ನಿಲ್ದಾಣದಲ್ಲಿ ಬಾಡಿಗೆ ವಾಹನಗಳನ್ನು, ಕುಳಿತುಕೊಳ್ಳುವ ಆರಾಮ ಕುರ್ಚಿಗಳನ್ನು ಸಂಸದ ಪ್ರತಾಪ್ ಸಿಂಹ ನೀಡಿದ‌್ದಾರೆ!ಮೈಸೂರು ನಗರಕ್ಕೆ ಹೆಸರು ತಂದುಕೊಟ್ಟಿದ್ದೇ ವಿಶ್ವಮಾನವ ಎಕ್ಸ್ ಪ್ರೆಸ್ ಎಂದರೆ ಅತಿಶಯೋಕ್ತಿಯಲ್ಲ! ಮೈಸೂರಿನಲ್ಲಿ ಇವತ್ತಿನ ತನಕ ಯಾವ ಸಂಸದರಿಗೂ ಕೂಡ ಇಂತಹ ದೊಡ್ಡ ಮಟ್ಟದ ಯೋಜನೆಯನ್ನು ತರಲು ಸಾಧ್ಯವಾಗಿಲ್ಲ!ಚಾಮುಂಡಿ ಬೆಟ್ಟದಲ್ಲಿ ‘Water Plants’ನನ್ನು ನಿರ್ಮಿಸಿದ್ದು ಕೂಡ ಪ್ರತಾಪ್ ಸಿಂಹರ ಸಾಮಾಜಿಕ ಕಳಕಳಿ ಎಷ್ಟಿದೆಯೆಂಬುದಕ್ಕೊಂದು ಜೀವಂತ ನಿದರ್ಶನ!


: ಇದು ತೀರಾ ಮುಖ್ಯವಾದ ಸಾಧನೆಗಳಷ್ಟೇ! ಚಿಕ್ಕಪುಟ್ಟ ಕೆಲಸ ಕಾರ್ಯಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವ ಪ್ರತಾಪ್ ಸಿಂಹ ಎಂಬ ಮೈಸೂರಿನ ನಾಯಕರೊಬ್ಬರು ಇದೆಲ್ಲಕ್ಕಿಂತ ಹೊರತು ಪಡಿಸಿ ಒಬ್ಬ ಸ್ವಾಭಿಮಾನಿ ಹಿಂದೂ! ಸತ್ಯ!! ಹಿಂದುತ್ವದ ಅಡಿಯಲ್ಲಿಯೇ ರಾಜಕೀಯಕ್ಕೆ ಕಾಲಿಟ್ಟ ಪ್ರತಾಪ್ ಸಿಂಹ ಇವತ್ತಿಗೂ ಮತಕ್ಕೋಸ್ಕರ ತುಷ್ಟೀಕರಣಕ್ಕೆ ನಿಂತವರಲ್ಲ! “ನನ್ನ ಕೆಲಸ ನೋಡಿ ಮತ ನೀಡಿ’ ಎನ್ನುವ ಪ್ರತಾಪ್ ಸಿಂಹ ಇವತ್ತಿಗೂ ಮೈಸೂರಿನ ಸಿಂಹನಾಗಿಯೇ ಉಳಿದಿದ್ದಾರೆ!


ಇದನ್ನೆಲ್ಲ ಬಿಡಿ, ಹೇಳಲೇಬೇಕೆಂದರೆ ಸಂಸದರಾಗಿಯೂ ಕೂಡ, ಒಬ್ಬ ಸಾಮಾನ್ಯರ ಹಾಗೆ ಇವತ್ತಿಗೂ ತೀರಾ ಸರಳವಾಗಿ ಜೀನ್ಸು ಟೀ ಶರ್ಟ್ ತೊಟ್ಟು ಸಾಮಾನ್ಯನಲ್ಲಿ ಸಾಮಾನ್ಯರ ಹಾಗಿದ್ದು ಬಿಡುವ ಪ್ರತಾಪ್ ಸಿಂಹ ಅಡಿಗಡಿಗೂ ಅಚ್ಚರಿಯೇ ಇವತ್ತಿನ ಯಾವ ಸಂಸದರೊಬ್ಬರು ವೈಯುಕ್ತಿಕ ಸಮಸ್ಯೆಗಳನ್ನೂ ಬದಿಗಿರಿಸಿ, ಕೇವಲ ಸಮಾಜಕ್ಕಷ್ಟೇ ಬದುಕಬಲ್ಲರು?! ಎಲ್ಲೋ, ಕೋಟಿಗೆ ಸಿಗುವ ಇಂತಹ ನಾಯಕರಷ್ಟೇ! ಹೇಳ ಹೋದರೆ., ರಾಜಧಾನಿ ಬೆಂಗಳೂರಿಗಿಂತ ಇವತ್ತು ಮೈಸೂರು ಮುಂದುವರೆಯುತ್ತಲಿದೆ! ಕಾರಣ ಅವರೊಬ್ಬರೇ! ಪ್ರತಾಪ್ ಸಿಂಹ!!ಬಹುಷಃ ಒಬ್ಬ ಸಂಸದರಾಗಿ ಇಷ್ಟು ಮಟ್ಟದ ಸಾಧನೆಗಳನ್ನು ಮಾಡಿದಂತಹ ಪ್ರತಾಪ್ ಸಿಂಹರವರು ಭವಿಷ್ಯದಲ್ಲಿ ದೇಶದ ರಾಜಕೀಯ ನಾಯಕರಾಗಿ ಗುರುತಿಸಿಕೊಂಡರೂ ಅಚ್ಚರಿಯೇನಿಲ್ಲ! ಮೋದಿಯ ಅಪ್ಪಟ ಅಭಿಮಾನಿಯಾಗಿರುವ ಪ್ರತಾಪ್ ಸಿಂಹ ಎಂಬಂತಹ ನಿಜವಾದ ‘ಯೂತ್ ಐಕಾನ್’ ನಿಜಕ್ಕೂ ಒಂದು ಅಚ್ಚರಿಯೇ ಬಿಡಿ!


ಕೊನೆಯದಾಗಿ, ನನ್ನ ಪ್ರಕಾರ ಹೇಳಿಬಿಡುತ್ತೇನೆ! ಇಂತಹ ಸರಳ ಪ್ರಾಮಾಣಿಕ ರಾಜಕಾರಣಿ, ಮುತ್ಸದ್ದಿ ಹಾಗೂ ಅಪ್ಪಟ ಸಿದ್ಧಾಂತವಾದಿ, ಬಹುಷಃ ಸಿಗುವುದುಸುಲಭವಲ್ಲ!!

ಗಲ್ಫ್ ರಾಷ್ಟ್ರದ ಭೂಭಾಗಕ್ಕೆ ತಾನೇ ರಾಜನೆಂದು ಘೋಷಿಸಿಕೊಂಡ ಭಾರತೀಯ.

 ಈಜಿಪ್ಟ್:
 ಘೋಷಿಸಿಕೊಂಡಿದ್ದಾನೆ. ಅದೊಂದು ಮರಳುಗಾಡು ಪ್ರದೇಶ. ಈಜಿಪ್ಟ್ ಹಾಗೂ ಸುಡಾನ್‌ ದೇಶಗಳ ಗಡಿಯಲ್ಲಿದೆ
ಈ ಕುರಿತಂತೆ ತಾನು ಆ ಪ್ರದೇಶದ ಪ್ರಧಾನಿಯೆಂದು ಆ ಪ್ರದೇಶಕ್ಕೆ ದೇಶದ ಮಾನ್ಯತೆ ನೀಡಬೇಕೆಂದು ವಿಶ್ವಸಂಸ್ಥೆಗೆ ಮನವಿ ಸಲ್ಲಿಸಿದ್ದಾನೆ. ಆ ಪ್ರದೇಶದ ಹೆಸರು ಕಿಂಗ್‌ಡಮ್‌ ಆಫ್ ದೀಕ್ಷಿತ್‌ (ಕೆಒಡಿ)! ಹಾಗೂ ಆ ಪ್ರದೇಶಕ್ಕೆ ತನ್ನ ತಂದೆ ಅಧ್ಯಕ್ಷರೆಂದೂ ಘೋಷಿಸಿದ್ದಾನೆ.
ಆ ಪ್ರದೇಶ ಯಾವುದೇ ದೇಶಕ್ಕೂ ಸೇರಿಲ್ಲವಾಗಿದ್ದರಿಂದ ಸುಯಶ್‌ ದೀಕ್ಷಿತ್‌ ಆ ಪ್ರದೇಶವನ್ನು ತನ್ನ ದೇಶ ಮತ್ತು ಆ ಪ್ರದೇಶಕ್ಕೆ ತಾನೇ ಪ್ರಧಾನಿ ಅಂತ ಘೋಷಿಸಿ ಕೊಂಡಿದ್ದಾನೆ.1899ರಲ್ಲಿ ಸುಡಾನ್‌-ಈಜಿಪ್ಟ್ ಗಡಿ ಗುರುತಿಸಿದ್ದ ಬ್ರಿಟಿಷರು ಪ್ರಮಾದವಶಾತ್‌ ಆಗಿ ಈ ಜಾಗ ಯಾವ ದೇಶಕ್ಕೂ ಸೇರಿಸದೇ ಬಿಟ್ಟುಬಿಟ್ಟರು. ಹೀಗಾಗಿ ಅದನ್ನು ಈಗ ಸುಯಶ್‌ ದೀಕ್ಷಿತ್‌ ತನ್ನ ದೇಶವೆಂದು ಘೋಷಿಸಿ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಿದ್ದಾನೆ.

ಭಾರತೀಯ ರಾಜಕಾರಣದ ಬಹು ಜನಪ್ರಿಯ ನಾಯಕ,ನರೇಂದ್ರ ಮೋದಿ:ಅಮೆರಿಕ ಸಮೀಕ್ಷೆ

ವಾಷಿಂಗ್ಟನ್: ನ.16-ಭಾರತೀಯ ರಾಜಕೀಯ ರಂಗದಲ್ಲಿ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ನಾಯಕಾಗಿದ್ದಾರೆ ಎಂದು ಅಮೆರಿಕದ ಸಮೀಕ್ಷೆಯೊಂದು ತಿಳಿಸಿದೆ. ಅಮೆರಿಕದ ಪಿವ್ಯೂ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮೋದಿ 88ರಷ್ಟು ಜನಪ್ರಿಯತೆ ಪಡೆದಿದ್ದಾರೆ. ಪ್ರಧಾನಿ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಗಿಂತ (ಶೇ.58ರಷ್ಟು ಜನಪ್ರಿಯತೆ) 30 ಪಾಯಿಂಟ್‍ಗಳು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಗಿಂತ (ಶೇ.57) 31 ಪಾಯಿಂಟ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‍ಗಿಂತ(ಶೇ.39) 49 ಪಾಯಿಂಟ್‍ಗಳಿಂದ ಮುಂದುದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಈ ಸಂಸ್ಥೆ ಭಾರತದಲ್ಲಿ 2,464 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿ ಆ ಆಧಾರದ ಮೇಲೆ ಅಂ
ಕಿ ಅಂಶ ನೀಡಿದೆ.


ಸೋತಿದ್ದರೆ, ಅದು ಮೋದಿಯಲ್ಲ...! ನಮ್ಮ ವಿಕೃತ ಮನಸ್ಥಿತಿ ! ಅರ್ಥ ಮಾಡಿಕೊಳ್ಳಬೇಕಾದ ಸತ್ಯ...!

ಸೋತಿದ್ದರೆ ಅದು ಮೋದಿಲ್ಲ...!
  ನಮಗೆ ಅಭ್ಯಾಸವಾಗಿ ಹೋಗಿದೆ…

ಲಕ್ಷ ಕೋಟಿಗಳ ಭ್ರಷ್ಟಾಚಾರ ನಡೆದರೂ ‘ಅದೇನು ಮಹಾ’ ಅನ್ನುವ ಮಟ್ಟಿಗೆ ನಮಗೆ ಅದು ಒಗ್ಗಿ ಹೋಗಿದೆ. ಒಂದೇ ಕುಟುಂಬ ಇನ್ನೂ ನೂರು ವರ್ಷಗಳ ಕಾಲ ನಮ್ಮನ್ನು ಆಳಿದರೂ ನಮಗದು ಮತ್ತೊಂದು ದಾಸ್ಯ ಎಂದೆನಿಸುವುದೇ ಇಲ್ಲ. ಯೋಚನೆ ಮಾಡಿ, ಇವಿಷ್ಟಕ್ಕೆ ಆಗಿದ್ದರೆ ನಮಗೆ ಬ್ರಿಟಿಷರ ಆಳ್ವಿಕೆ ಸಾಕಿತ್ತು, ಅವರೇ ಲೂಟಿ ಮಾಡುತ್ತಿದ್ದರಲ್ಲ. ಇನ್ನು ನಮಗೆ ವಂಶಾಡಳಿತವೇ ಹಿತವೆನಿಸುವುದಾದರೆ ಹಿಂದೆ ನಮ್ಮ ದೇಶದಲ್ಲಿ ಅದೆಷ್ಟು ರಾಜವಂಶಗಳಿರಲಿಲ್ಲ.

ಈ ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ ಇದೆಲ್ಲ ಯಾಕೆ ಬೇಕಿತ್ತು? ಗಮನಿಸಿ, ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗಿನಿಂದ ಅದ್ಯಾಕೋ ಸಾಕಷ್ಟು ಜನರ ಹೊಟ್ಟೆ ತೊಳಸಲಾರಂಭಿಸಿದೆ. ಕಾರಣ ಸಾಕಷ್ಟಿದೆ. ಕೆಲವರಿಗೆ ಹಿಂದುತ್ವದ ಪರವಾಗಿದ್ದಾರೆ ಅನ್ನುವ ಕಾರಣ, ಕೆಲವರಿಗೆ ಆರ್.ಎಸ್.ಎಸ್ ಹಿನ್ನೆಲೆಯಿಂದ ಬಂದವರೆಂಬ ಕಾರಣ, ಹಲವರಿಗೆ ಬಿ.ಜೆ.ಪಿ ಪಕ್ಷದವರೆನ್ನುವ ಕಾರಣ, ಮತ್ತೆ ಕೆಲವರಿಗೆ ಚುನಾವಣೆಯಲ್ಲಿ ಅಭೂತಪೂರ್ವ ಅನ್ನುವ ರೀತಿಯಲ್ಲಿ ಗೆದ್ದರೆನ್ನುವ ಮತ್ಸರ ಕಾರಣ, ಇನ್ನಷ್ಟು ಜನರಿಗೆ ಈ ಮನುಷ್ಯ ಹಣಿದಷ್ಟೂ ಮಣಿಯದೆ ಇನ್ನಷ್ಟು ಬೆಳೆಯುತ್ತಿದ್ದಾನಲ್ಲ ಎನ್ನುವ ಹತಾಶೆಯ ಕಾರಣವಿರಬಹುದು.

ಇವೆಲ್ಲ ಒತ್ತಟ್ಟಿಗಿರಲಿ, ಗೆದ್ದ ನಂತರ ಅವರು ಈ ದೇಶದ ಪ್ರಧಾನಿ. ಆರ್.ಎಸ್.ಎಸ್, ಬಿ.ಜೆ.ಪಿ ಅಥವಾ ಹಿಂದೂಗಳಿಗೆ ಮಾತ್ರ ಮೋದಿ ಪ್ರಧಾನಿಯಲ್ಲ. ಅಥವಾ ಎಲ್ಲರಿಗೂ ತಿಳಿದ ಹಾಗೆ ಮೋದಿಯವರಾದರೂ ಎಂದೂ ಇಂಥ ತಾರತಮ್ಯದ ಧೋರಣೆ ತಾಳಲಿಲ್ಲ. ಚುನಾವಣೆಗೂ ಮುನ್ನ ರಾಮಮಂದಿರದಂಥ ವಿಷಯಗಳ ಜಪ ಮಾಡುತ್ತಿದ್ದ ಬಿ.ಜೆ.ಪಿ ಅಭಿವೃದ್ಧಿ ಮಂತ್ರ ಪಠಿಸುವಂತೆ ಮಾಡಿದವರು ಮೋದಿ. ಗೆದ್ದ ಮೇಲೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಹೋಗುವ ಪ್ರಯತ್ನ ಮಾಡಿದವರು ಮೋದಿ. ಅನಗತ್ಯ ವಿಚಾರಗಳೊಂದಿಗೆ ಮೋದಿಯವರನ್ನು ಹೊಗಳಬೇಕೆನ್ನುವ ಉದ್ದೇಶಗಳೊಂದಿಗೆ ಇದನ್ನೆಲ್ಲ ಬರೆಯುತ್ತಿಲ್ಲ. ಹೇಳಲೇಬೇಕಾದ ಒಂದಷ್ಟು ವಿಚಾರಗಳಿವೆ ಎನ್ನುವ ಕಾರಣಕ್ಕೆ ಈ ಪೀಠಿಕೆಯಷ್ಟೆ.

ಮುಖ್ಯವಾದ ಎರಡು ವಿಚಾರಗಳ ಮೂಲಕ ಇವೊತ್ತು ಕೆಲವರು ಮೋದಿಯವರನ್ನು ಬಯ್ಯುತ್ತಿದ್ದಾರೆ. ಅದರಲ್ಲಿ ಒಂದು ನೋಟು ನಿಷೇಧ ಹಾಗೂ ಜಿ.ಎಸ್.ಟಿ ಜಾರಿ. ಈ ಎರಡು ವಿಷಯಗಳಿಂದ ಜನರಿಗೆ ತೊಂದರೆಯಾಗಿದೆ ಎನ್ನುವುದನ್ನೇ ದೊಡ್ಡ ಕೂಗೆಬ್ಬಿಸಿ ಮೋದಿಯವರನ್ನು ನಿಂದಿಸುವ ಕೆಲಸ ಮಾಡಲಾಗುತ್ತಿದೆ. ಇಲ್ಲಿ ನಾವು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕಾದ ಸಣ್ಣ ವಿಚಾರವೊಂದಿದೆ, ಈ ಎರಡೂ ನಿರ್ಧಾರಗಳು ದೇಶಕ್ಕೆ ಮಾರಕವಾದ ವಿಷಯಗಳಲ್ಲ, ಜನರಿಗೆ ಕಷ್ಟಕೊಡಬೇಕೆನ್ನುವ ಉದ್ದೇಶಗಳಿಂದ ಕೂಡಿರುವಂಥದ್ದಲ್ಲ ಅಥವಾ ದೇಶಕ್ಕೆ ದ್ರೋಹ ಮಾಡುವಂಥದ್ದೂ ಅಲ್ಲ. ಐನೂರು ಹಾಗೂ ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡುವುದರಿಂದ ಕಪ್ಪು ಹಣವನ್ನು ಹೊರಗೆ ತರುವ ಉದ್ದೇಶವಿತ್ತು. ಇದರಿಂದ ಕಪ್ಪು ಹಣ ಹೊಂದಿರುವ ಹೊರತಾಗಿ ಬೇರೆ ಯಾರಿಗೆ ತೊಂದರೆಯಾಗುವುದಕ್ಕೆ ಸಾಧ್ಯ? ಇನ್ನು ಇದರಲ್ಲಿ ಲೋಪವಾಗಿದ್ದರೆ ಹೊಸ ನೋಟನ್ನು ಜನರಿಗೆ ತಲುಪಿಸುವುದರಲ್ಲಿ ಮಾತ್ರ ಅನ್ನುವುದು ನಿಜ. ಜನ ನಾಲ್ಕು ಸಾವಿರ ರೂಪಾಯಿಗಳಿಗಾಗಿ ದಿನಗಟ್ಟಲೇ ಬ್ಯಾಂಕ್ ಹಾಗೂ ಎ.ಟಿ.ಎಂಗಳ ಮುಂದೆ ಸರದಿ ಸಾಲಿನಲ್ಲಿ ನಿಂತು 

ಪರಿತಪಿಸುವಂತಾಯಿತು. ದೇಶಕ್ಕೆ ಒಳ್ಳೆಯದಾಗುತ್ತದೆ ಎನ್ನುವ ಕಾರಣಕ್ಕೆ ಸಾಮಾನ್ಯ ಜನರೂ ಕೂಡ ಪರಿಸ್ಥಿತಿಯನ್ನು ಸಹಿಸಿಕೊಂಡರು. ಆದರೂ ನಿರೀಕ್ಷೆಗಿಂತಲೂ ಹೆಚ್ಚೇ ತೊಂದರೆಯಾಯಿತು. ಯಾಕೆ ತೊಂದರೆಯಾಯಿತು? ಹೊಸ ನೋಟುಗಳು ಜನರನ್ನು ಸಕಾಲದಲ್ಲಿ ತಲುಪದೇ ಇರುವುದಕ್ಕೆ ಕಾರಣವೇನು? ಉತ್ತರ ತುಂಬ ಸರಳ. ಪ್ರಭಾವಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳ ಒಪ್ಪಂದ ಇಡೀ ನೋಟು ನಿಷೇಧದ ಉದ್ದೇಶವನ್ನೇ ಗಾಳಿಗೆ ತೂರಿತು. ಈ ಕಡೆ ಜನ ಎರಡು ಸಾವಿರದ ಎರಡು ಹೊಸ ನೋಟುಗಳಿಗಾಗಿ ಪರದಾಡುತ್ತಿರುವಾಗ ಆ ಕಡೆ ಕತ್ತಲಲ್ಲಿ ಶ್ರೀಮಂತರ ಕೋಟಿ ಕೋಟಿ ಕಪ್ಪು ಹಣ ಬಿಳಿಯಾಗುತ್ತಿತ್ತು.

ಪ್ರಧಾನಿ ಮೋದಿಯವರು ಬೇರೆಲ್ಲ ವಿಚಾರಗಳಲ್ಲೂ ತುಂಬ ರಹಸ್ಯ ಕಾಪಾಡಿಕೊಂಡು, ಬೇಕಾದ ಸಿದ್ಧತೆ ಮಾಡಿಕೊಂಡು ಕಳೆದ ವರ್ಷ ನವಂಬರ್ ಎಂಟನೇ ತಾರೀಕಿನ ರಾತ್ರಿ ನೋಟು ನಿಷೇಧದ ಬಗ್ಗೆ ಭಾಷಣ ಮಾಡಿದಾಗ ಇಡೀ ದೇಶ ಅಚ್ಚರಿಗೊಂಡಿತ್ತು. ಯಾಕೆಂದರೆ ಇಂಥ ಒಂದು ನಿರ್ಧಾರ ತೆಗೆದುಕೊಳ್ಳುವುದು ಯಾವ ನಾಯಕನಿಗೂ ಅಷ್ಟು ಸುಲಭವಲ್ಲ. ಭ್ರಷ್ಟರು, ಕಪ್ಪು ಹಣದ ಖಜಾನೆ ಹೊಂದಿರುವವರು ಎಲ್ಲ ಪಕ್ಷದಲ್ಲಿರುವ ಹಾಗೆ ಬಿ.ಜೆ.ಪಿಯಲ್ಲೂ ಇದ್ದರು. ಇದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡುವ ಕೆಲಸವಾಗಿರಲಿಲ್ಲ. ಹಾಗೂ ರಹಸ್ಯ ಕಾಪಾಡಿಕೊಳ್ಳುವುದೂ ಅಷ್ಟು ಸುಲಭವಲ್ಲ. 

ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಿದ್ದ ಮೋದಿಯವರು ಕಣ್ಮುಚ್ಚಿಕೊಂಡು ನಂಬಿದ್ದು ತುಂಬ ಸಭ್ಯ ವರ್ಗವೆಂದುಕೊಂಡಿದ್ದ ಬ್ಯಾಂಕಿನ ಅಧಿಕಾರಿಗಳನ್ನು ಮಾತ್ರ. ಆದರೆ ಅಲ್ಲಿನ ಕೆಲವು ದೇಶದ್ರೋಹಿ ಅಧಿಕಾರಿಗಳು ಜನರಿಗೆ ತಲುಪಬೇಕಾಗಿದ್ದ ಹೊಸ ನೋಟುಗಳನ್ನು ಪ್ರಭಾವಿ ವ್ಯಕ್ತಿಗಳಿಗೆ ತಲುಪಿಸಿ ಹಳೆಯ ನೋಟುಗಳನ್ನು ಕಮಿಷನ್ ಪಡೆದು ಬದಲಾಯಿಸಿಕೊಂಡರು. ಹಳೆಯ ನೋಟುಗಳನ್ನು ಪರ್ಸಂಟೇಜ್ ಮೂಲಕ ಬದಲಾಯಿಸಿಕೊಳ್ಳುವುದು ದೊಡ್ಡ ದಂಧೆಯಾಗಿಬಿಟ್ಟಿತು. ಪರಿಣಾಮವಾಗಿ ಜನ ಸಾಮಾನ್ಯರು ಪರದಾಡುವಂತಾಯಿತು. ಅಂದರೆ ಒಳ್ಳೆಯ ಉದ್ದೇಶವೊಂದು ಅಯೋಗ್ಯರಿಂದಾಗಿ ಹಾಳಾಗಿ ಹೋಯಿತೆಂದರೆ ಅದು ಮೋದಿಯವರ ವೈಫಲ್ಯ ಹೇಗಾಗುತ್ತದೆ? ಅದು ಮೋದಿಯವರ ಸೋಲು ಹೇಗಾಗುತ್ತದೆ ಎನ್ನುವುದು ನಾವು ಯೋಚಿಸಬೇಕಾದ ಪ್ರಶ್ನೆ..

ತೊಂದರೆಯಾಗಲಿಕ್ಕೆ ಸಾಧ್ಯವಿದೆ? ತೆರಿಗೆ ಮೊದಲೂ ಕಟ್ಟಬೇಕಿತ್ತು, ಕಟ್ಟುತ್ತಿದ್ದರು. ಈಗಲೂ ಕಟ್ಟಬೇಕು, ಕಟ್ಟುತ್ತಿದ್ದಾರೆ. ವಿಶೇಷ ಏನೆಂದರೆ ಜಿ.ಎಸ್.ಟಿ ಅನ್ನುವ ವಿಷಯ ಎಷ್ಟು ಪ್ರಚಾರ ಪಡೆಯಿತೆಂದರೆ ಬಿಲ್ ನಲ್ಲಿ ಎಲ್ಲರೂ ಕಣ್ಣರಳಿಸಿ ಜಿ.ಎಸ್.ಟಿ ಅನ್ನುವುದನ್ನೇ ಗಮನಿಸುವಂತಾಯಿತು. ವಸ್ತುವಿನ ಬೆಲೆಗಿಂತ ನಾವು ಶೇಕಡ ಹದಿನೆಂಟರಷ್ಟು ಹಣವನ್ನು ಹೆಚ್ಚು ಕೊಡುತ್ತಿದ್ದೆವೇನೊ ಎನ್ನುವ ಹಾಗೆ ಭಾವಿಸುವಂತಾಯಿತು. 
ಇದೀಗ ಜಿ.ಎಸ್.ಟಿ ಬಗ್ಗೆ ಎಲ್ಲರೂ ಮಾತಾಡುವವರೆ, ಎಲ್ಲರೂ ಆರ್ಥಿಕ ತಜ್ಞರೇ ಆಗಿದ್ದಾರೆ. ಇದರಿಂದ ಏನಂಥ ಅನಾಹುತ ಆಗುವುದಕ್ಕೆ ಸಾಧ್ಯ? ಬೇರೆ ಬೇರೆ ರೀತಿಯ ತೆರಿಗೆಗಳನ್ನೆಲ್ಲ ಸೇರಿಸಿ ಏಕರೂಪದ ತೆರಿಗೆ ಪದ್ಧತಿ ಜಾರಿ ಮಾಡಲಾಗಿದೆ. ನೂರಾರು ದೇಶಗಳಲ್ಲಿ ಈ ಪದ್ಧತಿ ಈಗಾಗಲೇ ಇದೆ, ಮತ್ತು ಯಶಸ್ವಿಯೂ ಆಗಿದೆ. ಈ ನಿಯಮ ಬಂದಿರುವುದರಿಂದ ತೆರಿಗೆ ಕಳ್ಳರಿಗಷ್ಟೇ ತೊಂದರೆಯಾಗಿದೆ. ಬೇರೆ ಯಾರಿಗಾದರೂ ಇದರಿಂದ ಏನು 
ಮೋದಿಯವರನ್ನು ವಿರೋಧಿಸುವವರು ಹಾಗೂ ಜಿ.ಎಸ್.ಟಿ ಬಂದಾಗಿನಿಂದ ತೆರಿಗೆ ಕದಿಯುವುದು ಕಷ್ಟವಾಗಿರುವಂಥವರು ಇದರಿಂದ ಇಡೀ ದೇಶದ ಅರ್ಥ ವ್ಯವಸ್ಥೆಯೇ ಹಾಳಾಗಿ ಹೋಯಿತೆನ್ನುವಂತೆ ಬೊಂಬಡಾ ಬಜಾಯಿಸತೊಡಗಿದರು. ಹೌದು, ಈ ಆರ್ಥಿಕ ಸುಧಾರಣೆಯಿಂದ ತೆರಿಗೆ ಕಳ್ಳತನ ಮಾಡುವವರಿಗೆ ಕಷ್ಟವಾಗಿರಬಹುದು, ಭ್ರಷ್ಟಾಚಾರ ಮಾಡುವವರು ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಂಡಿರಬಹುದು. ಇವರ್ಯಾರೂ ನಮಗೆ ತೊಂದರೆಯಾಗಿದೆಯೆಂದು ನೇರವಾಗಿ ಹೇಳಿಕೊಳ್ಳಲಾಗದೆ ಜನ ಸಾಮಾನ್ಯರಿಗೆ ಕಷ್ಟವಾಗಿದೆ, ಬಡವರಿಗೆ ತೊಂದರೆಯಾಗಿದೆ ಎಂದು ಇನ್ನ್ಯಾರದೋ ಹೆಸರು ಹೇಳಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಸಲಿಗೆ ಇವರ ಬುಡಕ್ಕೆ ಬೆಂಕಿ ಬಿದ್ದ ಪರಿಣಾಮವೇ ಈ ಎಲ್ಲ ಥರದ ಹತಾಶೆಯ ಹಾರಾಟಗಳು..

ಇನ್ನು ತೆರಿಗೆ ಲೆಕ್ಕಾಚಾರಗಳು ಒಂದೊಂದು ಮಿತಿಗೆ, ಒಂದೊಂದು ವಸ್ತುವಿಗೆ, ಒಂದೊಂದು ವರ್ಷದ ಬಜೆಟ್ ಗೆ ಅನುಗುಣವಾಗಿ ವ್ಯತ್ಯಾಸಗಳಾಗುತ್ತಲೇ ಇರುತ್ತವೆ. ತಲೆ ಕೆಡಿಸಿಕೊಂಡರೆ ಕ್ಲಿಷ್ಟವೂ ಹೌದು, ತುಂಬ ಚಿಂತಿಸದೆ ಸರ್ಕಾರಕ್ಕೆ ಸೇರಬೇಕಾಗಿರುವುದನ್ನು ಕೊಟ್ಟರೆ ಸುಲಭವೂ ಹೌದು. ಬಹುತೇಕ ಆರ್ಥಿಕ ತಜ್ಞರು ಹಾಗೂ ಜನ ಸಾಮಾನ್ಯರು ಹೇಳುವ ಹಾಗೆ ನೋಟು ನಿಷೇಧ ಹಾಗೂ ಜಿ.ಎಸ್.ಟಿ ಯಿಂದ ಅಂಥ ವ್ಯತ್ಯಾಸವೇನೂ ಆಗಿಲ್ಲ. ಏನೋ ಆಗಿ ಹೋಯಿತು ಎನ್ನುವಂತೆ ಬಿಂಬಿಸಲಾಗಿದ್ದೇ ಹೆಚ್ಚು. ನಿಜ, ಮೊದಲಿನಷ್ಟು ಸಲೀಸಾಗಿ ದುಡ್ಡು ಓಡಾಡುವುದಿಲ್ಲ, 

ಕೆಲಸ ಕಾರ್ಯಗಳಿಗೆ ಕಷ್ಟವಾಗಿದೆ ಎನ್ನುವ ಮಾತಿದೆ. ಸೈಟು, ಮನೆ, ಅಪಾರ್ಟ್ ಮೆಂಟ್ ಗಳು ಬಿಕರಿಯಾಗುತ್ತಿಲ್ಲ ಅನ್ನುವಂಥ ಕಾರಣಗಳನ್ನು ಕೊಡುತ್ತಾರೆ. ಯೋಚನೆ ಮಾಡಿ, ಮೊದಲು ಕೇವಲ ಕಪ್ಪು ಹಣದಿಂದಲೇ ಎಲ್ಲಾದರಲ್ಲೂ ಒಂದು ಧಾರಾಳತೆ ಬಂದಿತ್ತು. ಈಗ ಕಪ್ಪು ಹಣ ಮೊದಲಿನಷ್ಟು ಸುಲಭವಾಗಿ ಕೈ ಬದಲಾಗಲು ಸಾಧ್ಯವಿಲ್ಲ. ಹಾಗಾಗಿ ಎಷ್ಟೋ ವ್ಯವಹಾರಗಳು ಕುಂಠಿತವಾಗಿವೆ. ಇದು ಸಹಜವೆ, ಗಂಡ ಕಳ್ಖತನ ಮಾಡುವಾಗ ಮನೆ ಚೆನ್ನಾಗಿ ನಡೆಯುತ್ತಿತ್ತು, ಈಗ ಕಳ್ಳತನ ಬಿಟ್ಟ ಮೇಲೆ ಮನೆ ನಡೆಸುವುದು ಕಷ್ಟವಾಗಿದೆ ಅಂತ ಹೆಂಡತಿ ಹೇಳಿದಂತಾಗಿದೆ ಇವರ ಕತೆ. ಮತ್ತೆ ಕೆಲವರು ಪ್ರತಿಯೊಂದಕ್ಕೂ ರೀಯಲ್ ಎಸ್ಟೇಟ್ ಉದ್ಯಮವನ್ನೇ ಹೋಲಿಸಿ ಮಾತಾಡುತ್ತಾರೆ. ರೀಯಲ್ ಎಸ್ಟೇಟ್ ಬಿದ್ದು ಹೋಯಿತೆಂದರೆ ಎಲ್ಲ ವ್ಯವಹಾರಗಳು ಬಿದ್ದು ಹೋಯಿತೆನ್ನುವ ಮಟ್ಟಿಗೆ ಹುಯಿಲೆಬ್ಬಿಸುವ ಪರಿಪಾಠವೊಂದಿದೆ. 

ಭೂಮಿಯ ಬೆಲೆ ಹಣದ ವಿಚಾರದಲ್ಲಿ ಕುಸಿದರೆ ಒಳ್ಳೆಯದೇ, ಭೂಮಿ ಬೆಲೆ ಆಕಾಶಕ್ಕೇರಲೇಬಾರದು. ನೆಲದ ಮಾರಾಟ ಅಂದರೆ ಅದು ನೆಲಮೂಲದ ಸಂಸ್ಕೃತಿಯ ಮಾರಾಟವೂ ಹೌದು. ಕಪ್ಪು ಹಣ ಕಡಿಮೆಯಾದರೆ ಭೂವ್ಯವಹಾರದ ಹಾದರವೂ ಒಂದಿಷ್ಟು ಕಡಿಮೆಯಾದೀತು, ಒಳ್ಳೆಯದೆ. ಇದು ಭೂಮಿ ಹೊಂದುವವರ ಕನಸಿಗೆ ಪೂರಕವಾದ ಅಂಶವೇ ಹೊರತು ಕೆಟ್ಟದ್ದೇನಲ್ಲ.

ಇದೆಲ್ಲದರ ಹೊರತಾಗಿಯೂ ಮೋದಿ ಸರ್ಕಾರದ ಮೊದಲ ಅವಧಿಯ ಈ ಎರಡೂ ಆರ್ಥಿಕ ಸುಧಾರಣೆಗಳಿಂದ ಒಂದಷ್ಟು ಸಹಜ ಏರುಪೇರುಗಳಾಗಿವೆ ಅನ್ನುವುದೂ ನಿಜ. ನೂರಾರು ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಇಷ್ಟು ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಾಗ ಮತ್ತೆ ಸಹಜ ಸ್ಥಿತಿಗೆ ಬರುವುದಕ್ಕೆ ಸಮಯ ಹಿಡಿಯುತ್ತದೆ. ಆದರೆ ದೇಶದ ಎಲ್ಲ ಸಮಸ್ಯೆಗಳಿಗೆ ಈ ಎರಡು ನಿರ್ಧಾರಗಳೇ ಕಾರಣವೆನ್ನುವುದು ಮಾತ್ರ ಮೂರ್ಖತನವಾಗುತ್ತದೆ. ಇದಲ್ಲದೆಯೂ ಜನ ನೂರಾರು ಬೇರೆಬೇರೆ ಸಮಸ್ಯೆಗಳಿಂದ ಬಳಲುತ್ತಲೇ ಇದ್ದಾರೆ. ಸರ್ಕಾರದ ಇಂಥ ದಿಟ್ಟತನದ ಕಾರ್ಯಕ್ರಮಗಳು ನಿಧಾನವಾಗಿ ಅಂಥ ಬೇರೆ ಇನ್ನೆಷ್ಟೋ ಸಮಸ್ಯೆಗಳನ್ನು ಬಗೆಹರಿಸುತ್ತದೆನ್ನುವ ಗುಣಾತ್ಮಕ ಯೋಚನೆ ನಮ್ಮಲ್ಲಿರಬೇಕು. ಇಂಜೆಕ್ಷನ್ ಚುಚ್ಚಿದಾಗ ಆಗುವ ನೋವನ್ನೇ ದೊಡ್ಡದೆಂದು ಬೊಬ್ಬೆ ಹೊಡೆಯುತ್ತ ಕುಳಿತರೆ ಕಾಯಿಲೆ ವಾಸಿಯಾಗುವುದು ಹೇಗೆ? ಇಷ್ಟಕ್ಕೂ ಅಸಲಿ ಸಮಸ್ಯೆ ನೋಟ್ ಬ್ಯಾನೂ ಅಲ್ಲ, ಜಿ.ಎಸ್.ಟಿಯೂ ಅಲ್ಲ. 

ಮೋದಿ ಅಥವಾ ಮೋದಿ ಸರ್ಕಾರದ ವಿರುದ್ಧವಾಗಿ ಮಾತಾಡಲು ಬೇರಿನ್ನೇನೂ ಇವರಿಗೆ ಸಿಗದಿರುವುದೇ ಇಷ್ಟಕ್ಕೆಲ್ಲ ಕಾರಣ. ಸುಮ್ಮನೆ ಯೋಚಿಸಿ, ಮೋದಿ ಸರ್ಕಾರದಲ್ಲಿ ಬೋಫೋರ್ಸ್ ಹಗರಣ ನಡೆದಿದ್ದರೆ, ಲಕ್ಷಾಂತರ ಕೋಟಿಯ ಟುಜಿ ಸ್ಪೆಕ್ಟ್ರಮ್ ಭ್ರಷ್ಟಾಚಾರ ಆಗಿದ್ದರೆ, ಸಾವಿರಾರು ಕೋಟಿಗಳ ಕಲ್ಲಿದ್ದಲು ಅವ್ಯವಹಾರ ನಡೆದಿದ್ದರೆ, ನೂರಾರು ಕೋಟಿಗಳ ಕಾಮನ್ ವೆಲ್ತ್ ಪ್ರಕರಣ ಆಗಿದ್ದರೆ, ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯಂಥ ಲೂಟಿ ಆಗಿದ್ದರೆ ಈ ನೋಟ್ ಬ್ಯಾನ್ ಹಾಗೂ ಜಿ.ಎಸ್.ಟಿ ವಿಚಾರಗಳು ಎಷ್ಟು ಚಿಲ್ಲರೆಯಾಗಿ ಹೋಗಿರುತ್ತಿತ್ತು ಎಂದು ಊಹಿಸಿ. ಅಂದರೆ ತುಂಬಾ ಜನಕ್ಕೆ ಬೇಕಾಗಿರುವುದು ದೇಶಕ್ಕೆ ಒಳ್ಳೆಯದಾಗುವುದಲ್ಲ, ಮೋದಿ ಯಶಸ್ಸು ಕಾಣಬಾರದೆನ್ನುವುದು.

ಕೆಲವರಲ್ಲಂತೂ ಒಂದು ವಿಕೃತಿಯೇ ಬೆಳೆದು ಬಿಟ್ಟಿದೆ. ದೇಶ ಹಾಳಾದರೂ ಪರವಾಗಿಲ್ಲ, ಮೋದಿ ಮಾಡುವ ಯೋಜನೆಗಳು ಯಶಸ್ವಿಯಾಗಬಾರದು ಎನ್ನುವ ವಿಕೃತ ಮನಸ್ಥಿತಿ ಕಾಣುತ್ತಿದೆ. ಇದಕ್ಕಾಗಿ ದೇಶದ್ರೋಹಿಗಳನ್ನು, ಭಯೋತ್ಪಾದಕರನ್ನು, ಶತ್ರುರಾಷ್ಟ್ರವನ್ನು ಓಲೈಸುವುದಾದರೂ ಸರಿ, ಮೋದಿ ಸೋಲಬೇಕೆನ್ನುವ ಹತಾಶೆಯ ಹಂತವನ್ನೂ ತಲುಪಿದ್ದಾರೆ. ಅರ್ಥವಾಗದ ವಿಷಯವೆಂದರೆ ಪ್ರಧಾನಿ ಮೋದಿಯೆಂದರೆ ಇವರಿಗೆಲ್ಲ ಯಾಕಿಷ್ಟು ದ್ವೇಷ ಎನ್ನುವುದು. ಕೇಂದ್ರದಲ್ಲಿ ಮೋದಿ ಸರ್ಕಾರ ಬರುವುದಕ್ಕೂ ಮುಂಚೆ ಸುಖ, ಸಮೃದ್ಧಿಯ ರಾಮರಾಜ್ಯ ನಡೆಯುತ್ತಿತ್ತೆ? ರಸ್ತೆ ಬದಿಗಳಲ್ಲಿ ಚಿನ್ನ ಬೆಳ್ಳಿಯನ್ನು ಸೇರುಗಳಲ್ಲಿ ಅಳೆದು ಮಾರಾಟ ಮಾಡುತ್ತಿದ್ದರೆ? ಇದಕ್ಕೂ ಮುನ್ನ ಜಗತ್ತಿನ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿತ್ತೆ? ಹಸಿವು, ಬಡತನಗಳಿಲ್ಲದ ಸ್ವಚ್ಛ ಭಾರತದಲ್ಲಿ ತುಂಬ ಆನಂದವಾಗಿ ಬದುಕುತ್ತಿದ್ದರಾ?
 ಎಲ್ಲೆಲ್ಲೂ ಸಮಾನತೆ, ನ್ಯಾಯ, ನೀತಿ ತುಂಬಿ ತುಳುಕುತ್ತಿತ್ತೆ? ಈಗ ಇದೆಲ್ಲ ಏಕಾಏಕಿ ಹಾಳಾಗಿ ಹೋಯಿತೆ? ಮೋದಿಯವರು ಅಧಿಕಾರಕ್ಕೆ ಬಂದ ನಂತರ ಇವರೆಲ್ಲ ಏನನ್ನು ಕಳೆದುಕೊಂಡಿದ್ದಾರೆಂದು ಈ ಪರಿ ಕುಣಿಯುತ್ತಿದ್ದಾರೋ ತಿಳಿಯುತ್ತಿಲ್ಲ.

ಹೋಗಲಿ, ಮೋದಿಯವರು ಬೇಡವೆಂದೇ ಅಂದುಕೊಳ್ಳೋಣ. ಸದ್ಯದ ಪರಿಸ್ಥಿತಿಯಲ್ಲಿ ಇಷ್ಟು ಸಮರ್ಥವಾಗಿ ದೇಶ ನಡೆಸುವ ಮತ್ತೊಬ್ಬ ನಾಯಕ ಯಾರಿದ್ದಾರೆ? ಮೋದಿಯಿಂದ ಅಧಿಕಾರ ಕಿತ್ತುಕೊಂಡು ಯಾರ ಕೈಗೆ ಕೊಡುತ್ತೀರಿ? ಹೋಗಲಿ, ಮೋದಿಯವರೇ ಇನ್ನೂ ನೂರು ವರ್ಷ ಕಾಲ ಈ ದೇಶದ ನಾಯಕರಾಗಿರುತ್ತಾರಾ? ಮುಂದೆ ಇವರ ಮಕ್ಕಳು ಮೊಮ್ಮಕ್ಕಳು ಅಧಿಕಾರಕ್ಕೆ ಬರುತ್ತಾರಾ? ಯಾಕಿಷ್ಟು ಆತಂಕ ಇವರಿಗೆಲ್ಲ? ಮೋದಿಯವರಂಥ ನಾಯಕ ಯಾವ ಪಕ್ಷದಲ್ಲಿದ್ದರೂ ಒಪ್ಪಿಕೊಂಡು ಬಿಡಬಹುದೆನ್ನುವ ಸಣ್ಣ ಹೃದಯವಂತಿಕೆ ಯಾಕಿಲ್ಲ? ಈ ನೆಲಕ್ಕೆ ಗೌರವ ಕೊಟ್ಟರೆ ತಪ್ಪಾ? ದೇಶವನ್ನು ಭಕ್ತಿಯಿಂದ ನಮಿಸಿದರೆ ತಪ್ಪಾ? ನಾವು ಹುಟ್ಟಿದ ಧರ್ಮವನ್ನು ಇನ್ನೊಬ್ಬರಿಗೆ ತೊಂದರೆಯಾಗದಂತೆ ಅನುಸರಿಸಿ ಬದುಕಿದರೆ ತಪ್ಪಾ? ಇದನ್ನೆಲ್ಲ ಧಿಕ್ಕರಿಸಿದರೆ ಮಾತ್ರವೇ ಚಿಂತಕರಾ? ಇದನ್ನೆಲ್ಲ ಟೀಕಿಸಿದರೆ ಮಾತ್ರ ಬುದ್ಧಿಜೀವಿಗಳಾ? ಸ್ವಲ್ಪ ಸಮಾಧಾನವಾಗಿ, ಪೂರ್ವಗ್ರಹಗಳಿಲ್ಲದೆ ಯಾಕೆ ಯೋಚಿಸಬಾರದು?

ಹೋಗಲಿ, ಇಷ್ಟು ವರ್ಷಗಳ ಮೇಲಾದರೂ ಎಲ್ಲರೂ, ಎಲ್ಲಾದಕ್ಕೂ ಪ್ರಶ್ನೆ ಮಾಡುವಂಥ ಒಬ್ಬ ನಾಯಕ ಸಿಕ್ಕಿದ್ದಾನಲ್ಲ, ಖುಷಿಪಡೋಣ ಬಿಡಿ. ಮೋದಿಯೇ ಆಗಲಿ ಯಾರೇ ಆಗಲಿ ಪ್ರಜಾಪ್ರಭುತ್ವದಲ್ಲಿ ಪ್ರಶ್ನಾತೀತರೇನಲ್ಲ. ಆದರೆ ಯಾರನ್ನು ಯಾವ ಕಾರಣಕ್ಕೆ ಕೇಳಬೇಕು ಎನ್ನುವ ಪ್ರಜ್ಞೆ ನಮಗಿರಬೇಕು. ದ್ವೇಷ ಅಥವಾ ಟೀಕೆ ಉದ್ದೇಶವಾಗಬಾರದು. ಪ್ರತಿಯೊಂದಕ್ಕೂ ಟೀಕೆ ಮಾಡುವಷ್ಟು ಟೊಳ್ಳು ವ್ಯಕ್ತಿತ್ವವಾಗಿದ್ದರೆ ಇಡೀ ಜಗತ್ತು ಆ ವ್ಯಕ್ತಿಯನ್ನು ಒಪ್ಪಿಕೊಳ್ಳುತ್ತಿತ್ತೇ? ವಿದೇಶಗಳಲ್ಲಿ ತಲೆಗೆ ಐನೂರು ರೂಪಾಯಿ ಕೊಟ್ಟು ಲಾರಿಗಳಲ್ಲಿ ಜನ ತುಂಬಿಸಿಕೊಂಡು ಬರುವುದು ಸಾಧ್ಯವಿಲ್ಲ ಅಲ್ಲವೇ? 

ಅರ್ಥ ಮಾಡಿಕೊಳ್ಳಬೇಕಾದ ಸತ್ಯ ಇಷ್ಟೇ, ಅಯೋಗ್ಯರಿಂದ ಹಾಳಾದ ಒಳ್ಳೆ ಯೋಜನೆಗಳನ್ನು ಮೋದಿಯ ವೈಫಲ್ಯ ಅಥವಾ ತಪ್ಪು ನಿರ್ಧಾರವೆಂದು ಭಾವಿಸಿದರೆ ಅದು ಕೊನೆಗೆ ನಮ್ಮದೇ ಸೋಲಾಗುತ್ತದೆ. ಇಂಥ ಕಾರ್ಯಕ್ರಮಗಳು ಸೋತರೆ ಉಳಿಸಿಕೊಳ್ಳುವ ಯೋಗ್ಯತೆ ನಮಗೆಷ್ಟಿತ್ತು ಎನ್ನುವ ಮಾನದಂಡದಿಂದ ಅಳೆಯಬೇಕೇ ಹೊರತು ಮೋದಿಯನ್ನಲ್ಲ.

ಮೋದಿ ಶ್ರೀಮಂತರ ಪರವಾಗಿದ್ದಿದ್ದರೆ ನೋಟು ನಿಷೇಧವನ್ನು ಮಾಡಬೇಕಾಗಿರಲಿಲ್ಲ, ಜಿ,ಎಸ್.ಟಿಯೂ ಜಾರಿಯಾಗ್ತಾ ಇರಲಿಲ್ಲ. ಒಂದಂತೂ ನಿಜ, ಕೃಷಿಯ ಜೊತೆಗೆ ಕೈಗಾರಿಕೆ ಬೆಳೆಯದೆ ಯಾವ ದೇಶವೂ ಉದ್ಧಾರವಾಗಿಲ್ಲ. ಜನವಿರೋಧಿ ನಿರ್ಧಾರಗಳು ಬಂದಾಗ ಯಾರೇ ಆದರೂ ವಿರೋಧಿಸೋಣ. ಇಷ್ಟೆಲ್ಲ ವಿರೋಧಗಳ ನಡುವೆಯೂ ಒಬ್ಬ ವ್ಯಕ್ತಿ ದಿನದಲ್ಲಿ ಹದಿನೆಂಟಿಪ್ಪತ್ತು ಗಂಟೆಗಳ ಕಾಲ ದಣಿವರಿಯದೆ ದುಡಿಯುತ್ತಾನೆಂದರೆ ಒಂದಷ್ಟು ಕಾದು ನೋಡುವುದಕ್ಕೇನು? ಒಬ್ಬ ಪ್ರಜೆಯಾಗಿ ಸರಿ ಅನ್ನಿಸಿದಾಗ ನನ್ನ ಪ್ರಧಾನಿ ಎಂದು ಪರವಾಗಿ ನಿಲ್ಲುವುದು ಹೇಗೆ ತಪ್ಪಾಗುತ್ತದೆ..?

ಉಗ್ರ ಮಸೂದ್‌ ಸಂಬಂಧಿ ಸೇರಿ ಮೂವರು ಫಿನಿಶ್‌!


ಶ್ರೀನಗರ:ಸೋಮವಾರ ನಡೆದ ಎನ್‌‌ಕೌಂಟರ್‌ನಲ್ಲಿ ಪಾಕ್‌ ಮೂಲದ ಜೈಶ್‌-ಇ-ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜಾರ್‌ನ ಸಂಬಂಧಿ ಸೇರಿ ಮೂವರು ಭಯೋತ್ಪಾದಕರನ್ನು ಸದೆಬಡಿಯಲಾಗಿದೆ. 
 ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯ ಹುಟ್ಟಡಗಿಸಲು ಮುಂದಾಗಿರುವ ಭಾರತೀಯ ಸೇನೆ ಮತ್ತೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ.
ಪುಲ್ವಾಮಾ ಜಿಲ್ಲೆಯ ಅಗ್ಲಾರ್‌ ಕಂಡಿ ಗ್ರಾಮದಲ್ಲಿ ಸೋಮವಾರ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ನಡೆದಿತ್ತು. ಮೂವರು ಉಗ್ರರನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಸೈನಿಕರ ಗುಂಡಿಗೆ ಹತರಾದ ಮೂವರು ಪೈಕಿ ಉಗ್ರ ಮಸೂದ್‌ ಅಜಾರ್‌ ಸಹೋದರ ಸಂಬಂಧಿ, ವಿಭಾಗೀಯ ಉಗ್ರ ಕಮಾಂಡರ್ ತಲ್ಹಾ ರಶೀದ್‌ ಸಹ ಸೇರಿದ್ದಾನೆ. ಇದನ್ನು ಜೈಶ್‌-ಇ-ಮೊಹಮ್ಮದ್‌ ಉಗ್ರ ಸಂಘಟನೆಯ ವಕ್ತಾರನೇ ಸ್ಪಷ್ಟಪಡಿಸಿದ್ದಾನೆ. 

www.reportperiod.com

ನಾನು ಯಾವತ್ತೂ ಕುರ್ಚಿಗೆ ಅಂಟಿಕೊಂಡವಲ್ಲ; BSY

 Monday, 07.11.2017, 6:47 PM
ಬೆಂಗಳೂರು:ಬಿಜೆಪಿ- ಜೆಡಿಎಸ್ ಸೇರಿ ಎಚ್.ಡಿ. ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದೆವು. ಅವರ ಅವಧಿಯಲ್ಲಿ ನಾನು ಒಂದು ತಕರಾರೂ ಮಾಡಲಿಲ್ಲ. ಆದರೆ ನಾನು ಮುಖ್ಯಮಂತ್ರಿ ಆದ ಕೂಡಲೆ ಅಪ್ಪ- ಮಕ್ಕಳು ತಕರಾರು ಮಾಡಿದರು. ನಾನು ಯಾವತ್ತೂ ಕುರ್ಚಿಗೆ ಅಂಟಿಕೊಂಡವಲ್ಲ.
ಪ್ರಪಂಚದಲ್ಲಿ ಎಲ್ಲರೂ ಪ್ರಧಾನಿ ಮೋದಿಯವರ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮುದ್ರಾ ಯೋಜನೆಯ ಮೂಲಕ ನೀವು ಇನ್ನೊಬ್ಬರ ಮುಂದೆ ಕೈಒಡ್ಡಿ ನಿಲ್ಲುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ತಾಯಂದಿರು ಗೌರವದಿಂದ ಜೀವನ ನಡೆಸುವಂತಾಗಬೇಕು ಎಂಬುದು ಮೋದಿಯವರ ಉದ್ದೇಶ.
ಇನ್ನು ನಾಲ್ಕೈದು ತಿಂಗಳಿದೆ. ಈ ಸರ್ಕಾರ ಇನ್ನೇನು ಮಾಡಲು ಸಾಧ್ಯ? ದುಡಿಯುವ ಕೈಗೆ ಕೆಲಸ ಕೊಡಲಿಲ್ಲ. ಕೊಟ್ಟಿದ್ದು ಕೇವಲ‌ ಸುಳ್ಳು ಭರವಸೆ. ರಾಜ್ಯದ ಅಭಿವೃದ್ಧಿಗಾಗಿ ನಮಗೆ ಆಶೀರ್ವಾದ ಮಾಡಿ. ಹಾಸನ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಮಾಡಲು ಶ್ರಮಿಸುವೆ.
ರೈತನ ಹೊಲಕ್ಕೆ ನೀರು ಕೊಡಬೇಕು.. ಬೆಳೆದ ಬೆಳೆಗೆ ಉತ್ತಮ‌ ಬೆಲೆ ಕೊಡಬೇಕು. ಬೆಳೆ ಹಾನಿಯಾದರೆ ಸರಿಯಾದ ಪರಿಹಾರ ಕೊಡಿಸಬೇಕು ಎಂಬುದು ನನ್ನ ಆಸೆ‌. ಅದಕ್ಕೆ ನಿಮ್ಮ ಬೆಂಬಲ ಬೇಕು.BSY
www.reportperiod.com

ನಮ್ಮ ದೇವೇಗೌಡರು ಮಾಡಿದ ಕೆಲಸಗಳು...

1.ಪ್ರಥಮವಾಗಿ ಮಾಡಿದ್ದೆ ಅಲಮಟ್ಟಿ ಡ್ಯಾಮ್ ನ ಎತ್ತರವನ್ನು ಚಂದ್ರಬಾಬು ನಾಯ್ಡುವಿನ ವಿರೋಧದ ನಡುವೆಯು 524 ಮೀಟರ್ಗೆ ಏರಿಸುವ ವಿನ್ಯಾಸಕ್ಕೆ ಅಂಗೀಕಾರ ನೀಡಿದರು.

2. ರಾಜ್ಯಗಳ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸಹಾಯಧನ ನೀಡಬಾರದೆನ್ನುವ "ಗಾಡ್ಗಿಲ್ ಫಾರ್ಮುಲ"ವನ್ನು ಮಾರ್ಪಡಿಸಿ ಆಲಮಟ್ಟಿಯಂತಹ ಯೋಜನೆಗಳಿಗೆ ಸಾವಿರ ಕೋಟಿ ಅನುದಾನ ನೀಡಿದರು.

3. ನಷ್ಟದಲ್ಲಿದ್ದ ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಭದ್ರಾವತಿ ಉಕ್ಕು ಕಾರ್ಖಾನೆಗೆ ಬೀಗ ಮುದ್ರೆ ತಪ್ಪಿಸಲು 600ಕೋಟಿ ಅನುದಾನ ನೀಡಿ SAILನ ಸುರ್ಪದಿಗೆ ಒಪ್ಪಿಸಿದರು.

4. ಬೆಂಗಳೂರು ಮತ್ತು ಮೈಸೂರಿಗೆ ನ್ಯಾಷನಲ್ ಗೇಮ್ ವಿಲೇಜ್ ಸ್ಥಾಪಿಸಿ ನ್ಯಾಷನಲ್ ಗೇಮ್ ನಡೆಸಿದರು.

5. ಬೆಂಗಳೂರಿನ ಎಲ್ಲಾ ಭಾಗಕ್ಕೂ ಕುಡಿಯುವ ನೀರಿನ ಅವಶ್ಯಕತೆ ಇರುವುದನ್ನು ಮನಗಂಡಿದ್ದ ಗೌಡರು ತಮಿಳುನಾಡಿನ ವಿರೋಧದ ನಡುವೆಯು 9ಟಿಎಂಸಿ ನೀರು ಸಿಗುವಂತೆ ಮಾಡಿದರು, ಅದನ್ನೇ ಬೆಂಗಳೂರಿನ ಹೊರವಲಯದ ಜನ ಈಗ ಕುಡಿಯುತ್ತಿರುವುದು.

6. ಬೆಂಗಳೂರಿನ ಬೆಳವಣಿಗೆಗೆ ರಸ್ತೆಗಳ ವಿಸ್ತೀರ್ಣ ಅನಿವಾರ್ಯವಾಗಿತ್ತು ಆದರೆ ಆ ಜಾಗವೆಲ್ಲಾ ಭಾರತೀಯ ಸೇನೆಗೆ ಸೇರಿದ್ದ ಕಾರಣ ಕೇಂದ್ರ ಸರ್ಕಾರದೊಂದಿಗೆ ಏನೇ ವಿನಂತಿಗಳು ನಡೆದಿದ್ದರು 15ವರ್ಷಗಳಿಂದ ಸಾಧ್ಯವಾಗಿರಲಿಲ್ಲ, ಆದರೆ ಗೌಡರು ಸೇನೆಗೆ ಸೇರಿದ್ದ 85 ಎಕರೆ ಜಾಗವನ್ನು ಬಿಡಿಎಗೆ ವರ್ಗಾವಣೆ ಮಾಡಿ ಇಂದಿನ ಹಳೆ ವಿಮಾನ ರಸ್ತೆ, ಸಿವಿ ರಾಮನ್ ರಸ್ತೆ, ಹಲಸೂರು ಕೆರೆ ರಸ್ತೆ, ಕೋರಮಂಗಲ ರಸ್ತೆಗಳು ನಿರ್ಮಾಣವಾಗಿ ರಸ್ತೆ ಸಂಚಾರ ಸುಗುಮವಾಯಿತು.

7. ಬೆಂಗಳೂರು ಸೇರಿದಂತೆ ಹಲವು ರಾಜ್ಯಗಳಲ್ಲಿ ನಿರ್ಮಾಣ ವಾಗುತ್ತಿದ್ದ ಐಟಿ ಪಾರ್ಕ್ ಗಳು ಮುಂದೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ಮನಗೊಂಡು ಐಟಿ ಉದ್ಯಮವನ್ನು ಉತ್ತೇಜಿಸಲು ಐಟಿ ಉದ್ಯಮಕ್ಕೆ 10ವರ್ಷ ಟ್ಯಾಕ್ಸ್ ಹಾಲಿಡೆ ಘೋಷಿಸಿ ದೇಶದಲ್ಲಿ ಐಟಿ ಕ್ರಾಂತಿಗೆ ಮುನ್ನಡಿ ಬರೆದರು.

8. ಆಗ ನಮ್ಮ ರಾಜ್ಯಕ್ಕೆ ಪ್ರತ್ಯೇಕ ರೈಲ್ವೆವಲಯವಿಲ್ಲದೆ ಉದ್ಯೋಗದಲ್ಲಿ ಮತ್ತು ರೈಲುಗಳ ವಿಚಾರದಲ್ಲಿ ಅನ್ಯಾಯವಾಗುತ್ತಿದಿದ್ದನ್ನು ಮನಗೊಂಡು ರಾಜ್ಯಕ್ಕೆ ಪ್ರತ್ಯೇಕ ರೈಲ್ವೆವಲಯವನ್ನು ತಂದರು.

9. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಸ್ಥಾಪನೆಗೆ ರೂಪರೇಷಗಳನ್ನು ಸಿದ್ಧಪಡಿಸಿ, ಅನುಮತಿ ನೀಡಿದರು.

10. ಸೀಬರ್ಡ ನೌಕಾ ನೆಲೆಗೆ ಹೆಚ್ಚಿನ ಅನುದಾನ ನೀಡಿದರು

11. ಘಟಪ್ರಭ ಮತ್ತು ಕಾರಂಜಿ ನೀರಾವರಿ ಯೋಜನೆಗಳಿಗೆ ಹಣ ಒದಗಿಸಿ ಅನುಷ್ಠಾನಗೊಳಿಸಿದರು.

12. ತುಮಕೂರು, ಬಳ್ಳಾರಿ, ಬೆಳಗಾವಿ, ಬಿಜಾಪುರ, ಹಾಸನ, ಧಾರವಾಡ, ಶಿವಮೊಗ್ಗ, ಮೈಸೂರು ಮುಂತಾದಡೆ 20 ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ನೀಡಿದರು.
ದೇವೇಗೌಡರು ಪ್ರಧಾನಿಯಾಗಿದ್ದಾಗ ಮಾಡಿದ ಕೆಲಸಗಳು.

13. 1988ರ ನಂತರ ಜಮ್ಮು ಕಾಶ್ಮೀರದಲ್ಲಿ ಚುನಾವಣೆಗಳೆ ನಡೆಯದೆ ಎಲ್ಲೆಲ್ಲೂ ಅಶಾಂತಿ ತಲೆದೂರಿದ ಸಮಯದಲ್ಲಿ ಗೌಡರು ಕಾಶ್ಮೀರಕ್ಕೆ ತೆರಳಿ, ಅಲ್ಲಿನ ಜನರಿಗೆ ವಿಶ್ವಾಸ ಮೂಡಿಸಿ, ಚುನಾವಣೆ ನಡೆಸಿ, ಕಣಿವೆ ರಾಜ್ಯದಲ್ಲಿ ಶಾಂತಿ ನೆಲಸುವ ಹಾಗೆ ಮಾಡಿದರು.

14. ಬಹಳಷ್ಟು ವರ್ಷಗಳಿಂದ ಬಾಂಗ್ಲ ದೇಶದೊಂದಿಗಿದ್ದ ಫರಕ್ಕ ಬ್ಯಾರೇಜಿನ ನೀರಿನ ಸಮಸ್ಯೆಯನ್ನು ಕೆಲವೇ ದಿನಗಳಲ್ಲಿ ಬಾಂಗ್ಲ ಪ್ರಧಾನಿಯೊಂದಿಗೆ ಸೌಹಾರ್ದಯುತವಾಗಿ ಬಗೆಹರಿಸಿದರು.

15. ದೇಶದ 10 ಡ್ರೀಮ್ ಬಜೆಟ್ ಗಳಲ್ಲಿ ಗೌಡರದ್ದು ಓಂದು.

16. ಗುಜರಾತ್ ಮತ್ತು ಮಧ್ಯಪ್ರದೇಶಗಳ ನಡುವೆಯಿದ್ದ ನೀರಿನ ಸಮಸ್ಯೆಯನ್ನು ಚಾಣಾಕ್ಷತನದಿಂದ ಬಗೆಹರಿಸಿದರು.

17. ರಾಷ್ಟ್ರೀಯ ಕೃಷಿ ಯೋಜನೆಯನ್ನು ತಂದರು.

18. ದಿಲ್ಲಿ ಮೆಟ್ರೋಗೆ ಅನುಮತಿ ನೀಡಿ, ಕೇಂದ್ರ ಸರ್ಕಾರದಿಂದ 50%ರಷ್ಟು ಅನುದಾನ ನೀಡಿ, ಕೆಲಸಕ್ಕೆ ಚಾಲನೆ ನೀಡಿದರು.

19. ಪ್ರಥಮವಾಗಿ ಲೋಕಪಾಲ ಮಸೂದೆ ಮಂಡಿಸಿದರು.

20. ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳ ಮೀಸಲು ವಿಧೇಯಕ ಮಂಡಿಸಿದರು.

21. ದೇಶದ ಅಭಿವೃದ್ಧಿಗೆ ಹೆದ್ದಾರಿ ನಿರ್ಮಾಣದ ಮಹತ್ವವನ್ನು ಮನಗೊಂಡು, ಹೆದ್ದಾರಿ ನಿರ್ಮಾಣದ ರಹದಾರಿ ಬಗ್ಗೆ ಕ್ಯಾಬಿನೆಟ್ ನಲ್ಲಿ ನಿರ್ಧಾರ ಕೈಗೊಳ್ಳುವ ಮೂಲಕ ಚಾಲನೆಯನ್ನು ನೀಡಿದರು.

22. ರೈತರ ಅನುಕೂಲಕ್ಕಾಗಿ ಟ್ರಾಕ್ಟರ್ ಮತ್ತು ಕೃಷಿ ಉತ್ಪನ್ನಗಳಿಗೆ ಸಬ್ಸಿಡಿ ಕೊಟ್ಟು, ಟ್ಯಾಕ್ಸ್ ಫ್ರೀ ಮಾಡಿ ರೈತರ ಕಲ್ಯಾಣಕ್ಕೆ ಮುನ್ನುಡಿ ಬರೆದರು.

23. ಪ್ರಥಮ ಬಾರಿಗೆ ಕಪ್ಪುಹಣದ ಮೇಲೆ ಕಣ್ಣಿಟ್ಟು, ಕಾಳ ಧನಿಕರಿಗೆ ಸಿಂಹಸ್ವಪ್ನರಾಗಿ 10000ಕೋಟಿ ಕಪ್ಪು ಹಣ ಹೊರತಂದರು.

24. 1997ರಲ್ಲಿ ಓಮ್ಮೆ ಪಂಜಾಬ್ ನ ರೈತರು ಯತೇಚ್ಚವಾಗಿ ಭತ್ತ ಬೆಳೆದ ಪರಿಣಾಮ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಂತಾಯಿತು. ರೈತರಿಂದ ಭತ್ತ ಖರೀದಿಸಲು ಯಾರೂ ಮುಂದೆ ಬರಲಿಲ್ಲ ಜೊತೆಗೆ ರೈತರಿಗೆ ಆಸರೆಯಾಗಬೇಕಿದ್ದ ಅಲ್ಲಿನ ಸ್ಥಳೀಯ ಪಂಜಾಬ್ ಸರಕಾರವೂ ರೈತರಿಗೆ ಸಹಾಯ ಮಾಡಲಿಲ್ಲ ಆದರೆ ಪ್ರಧಾನಿಯಾಗಿದ್ದ ದೇವೇಗೌಡರಿಗೆ ವಿಚಾರ ತಿಳಿದು ರೈತರು ಬೆಳೆದ ಅದೇಷ್ಟೇ ಭತ್ತವಿದ್ದರೂ ಆ ಎಲ್ಲಾ ಭತ್ತವನ್ನು ರೈತರಿಂದ ಖರೀದಿಸಲು ಆದೇಶ ನೀಡುವ ಮೂಲಕ ಮಣ್ಣಿನ ಮಗ ಎಂಬುವುದನ್ನು ಮತ್ತೊಮ್ಮೆ ಸಾಭಿತು ಪಡಿಸಿದರು .ದೇವೇಗೌಡರ ಈ ಸಹಾಯವನ್ನು ಪಂಜಾಬಿನ ರೈತರು ಮರೆಯಲಿಲ್ಲ ತಾವು ಬೆಳೆಯುವ ಭತ್ತದ ತಳಿಯೊಂದಕ್ಕೆ ದೇವೇಗೌಡ ಎಂದು ನಾಮಕರಣ ಮಾಡುವ ಮೂಲಕ ದೇವೇಗೌಡರನ್ನು ಸದಾ ನೆನಪಿಸಿಕೊಳ್ಳುತ್ತಾರೆ.
ಹೀಗೆ ಕೇವಲ 11ತಿಂಗಳಲ್ಲಿ, ತಮ್ಮ ಇತಿಮಿತಿಯಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲದೆ ಬಹಳಷ್ಟು ಕೆಲಸಮಾಡಿ, ಯಾವುದೇ ಪ್ರಚಾರವಿಲ್ಲದೆ ಎಲೆಮರೆ ಕಾಯಿಯ ಹಾಗೆ ಬದುಕುತ್ತಿದ್ದಾರೆ....
ಕೇವಲ 10 ತಿಂಗಳು ಪ್ರಧಾನಿಯಾಗಿದ್ದ ದೇವೇಗೌಡರು ಒಪ್ಪಿಗೆ ಕೊಟ್ಟ ರೈಲ್ವೆ ಯೋಜನೆಗಳಲ್ಲಿ ಇಂದು ನಮ್ಮ ನಾಡಿನಲ್ಲಿ ಓಡಾಡುತ್ತಿರುವ ಅರ್ಧ ರೈಲ್ವೆ ಯೋಜನೆಗಳಿವೆ, ಅವತ್ತು ದೇವೇಗೌಡರು ಜಾರಿಗೊಳಿಸಿದ್ದನ್ನು ಇವತ್ತಿಗೂ ಪೂರ್ಣಗೊಳಿಸಲಾಗಿಲ್ಲವೆoದರೇ ನಿಮಗೆ ಆಶ್ಚರ್ಯವಾಗಬಹುದ.
ಇಲ್ಲಿ ಮೊನ್ನೆ ಮೊನ್ನೆಯಷ್ಟೆ ಉದ್ಘಾಟನೆಗೊoಡ
🎯.ಬೆಂಗಳೂರು -ಹಾಸನ ಹೊಸ ರೈಲು ಮಾರ್ಗದಿಂದ ಹಿಡಿದು
🎯.ಬೆಂಗಳೂರು ಮತ್ತು ಗೋವಾದ ವಾಸ್ಕೋ ನಡುವೆ ಹೊಸ ರೈಲು ಬೆಂಗಳೂರು ಎಕ್ಸ್ಪ್ರೆಸ್
🎯.ಬೆಂಗಳೂರಿನಿಂದ ಹುಬ್ಬಳ್ಳಿಯ ವರೆಗೆ ಹೊಸ ಎಕ್ಸ್ಪ್ರೆಸ್ ರೈಲು (ವಾರಕ್ಕೊಂದು ಬಾರಿ)
🎯.ಹುಬ್ಬಳ್ಳಿ - ಅಂಕೋಲ ಹೊಸ ರೈಲು ಮಾರ್ಗ
🎯.ಬೆಂಗಳೂರು- ಸತ್ಯಮಂಗಳ ಹೊಸ ರೈಲು ಮಾರ್ಗ ಪ್ರಸ್ತಾಪ
🎯.ಹಾಸನ-ಅರಸೀಕೆರೆ ರೈಲ್ವೆ ಮಾರ್ಗ ಮೀಟರ್ ಗೇಜ್ ನಿಂದ ಬ್ರಾಡ್ಗೇಜ್ ಆಗಿ ಪರಿವರ್ತನೆ
🎯.ಬಂಗಾರಪೇಟೆ-ಕೋಲಾರ ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಪರಿವರ್ತನೆಯನ್ನು ಸಂಪೂರ್ಣವಾಗಿಸೋದು
🎯.ಮೈಸೂರು ಹೊಳೆನರಸಿಪುರ ಮೀಟರ್ ಗೇಜ್ ನಿಂದ ಬ್ರಾಡ್ಗೆಜ್ಗಗೆ ಹಳಿಗಳ ಬದಲಾವಣೆ
🎯.ಮೈಸೂರು -ಚಾಮರಾಜನಗರ ಮೀಟರ್ಗೆಜ್ ನಿಂದ ಬ್ರಾಡ್ಗೇಜ್ ಆಗಿ ಪರಿವರ್ತನೆ
🎯.ಕೆಂಗೇರಿ-ರಾಮನಗರ ನಡುವೆ ದ್ವಿಪಥ ರೈಲ್ವೆ ಹಳಿ ಮಾರ್ಗ
🎯.ಯಶವಂತಪುರ ತುಮಕೂರು ನಡುವೆ ದ್ವಿಪಥ ರೈಲ್ವೆ ಹಳಿಯ ನಿರ್ಮಾಣ
🎯.ಹೊಸ ಮಾರ್ಗಗಳ ಸಮೀಕ್ಷೆ ಬೀದರ್ -ಗುಲ್ಬರ್ಗಾ-ಹೊಸ್ಪೆಟೆ,ಬೆಳಗಾವಿ -ಧಾರವಾಡ,ಬೆಂಗಳೂರು-ಶ್ರಿಂಗೇರಿ,ದಾವಣಗೆರೆ-ಭದ್ರಾವತಿ
🎯.ಕೊಂಕಣ ರೈಲ್ವೆ ಪ್ರಾಜೆಕ್ಟ್ ನ ಮುಕ್ತಾಯ.
ಕೊನೆಯದಾಗಿ
🎯.ಮುoದಿನ ತಿಂಗಳು ಉದ್ಘಾಟನೆಗೆ ಸಿದ್ದಗೊoಡಿರುವ ಮೈಸೂರು_ಬೆoಗಳೂರು ದ್ವಿ_ಪಥ (ಡಬಲ್ ಟ್ರಾಕ್) ರೈಲು ಹಳಿಗೆ ಒಪ್ಪಿಗೆ ಕೊಟ್ಟಿದ್ದೆ ನಮ್ಮ ದೇವೇಗೌಡರು..

ಭಾರತೀಯ ಸೇನೆ ಪಾಕಿಸ್ತಾನದ ನೌಶೇರಾ ಸೆಕ್ಟರ್ ನ ಹಲವು ಸೇನಾ ನೆಲೆಗಳ ಮೇಲೆ ದಾಳಿ


ನವದೆಹಲಿ: ಪಾಕಿಸ್ತಾನ ಪ್ರೇರೇಪಿತ ಭಯೋತ್ಪಾದನಾ ಕೃತ್ಯಗಳಿಗೆ ಪ್ರತೀಕಾರವಾಗಿ ಗಡಿನಿಯಂತ್ರಣ ರೇಖೆಯಲ್ಲಿ ದಾಳಿ ನಡೆಸಿದ ಭಾರತೀಯ ಸೇನೆ ಪಾಕಿಸ್ತಾನದ ನೌಶೇರಾ ಸೆಕ್ಟರ್ ನ ಹಲವು ಸೇನಾ ನೆಲೆಗಳಿಗೆ
ಹಾನಿಯುಂಟುಮಾಡಿದೆ. ಈ ಸ್ಥಳದಿಂದ ಉಗ್ರರು ನುಸುಳಲು ಪಾಕಿಸ್ತಾನ ಅನುವುಮಾಡಿಕೊಡುತ್ತಿತ್ತು. 
ಈ ದಾಳಿಯ ನಿಖರವಾದ ಸಮಯವನ್ನು ತಿಳಿಸದ ಮೇಜರ್ ಜನರಲ್ ಅಶೋಕ್ ನರುಲಾ, ಸೇನೆಯ ಈ ಕ್ರಮ ಪಾಕಿಸ್ತಾನದ ನೆಲೆಗಳಲ್ಲಿ ಭಾರಿ ಹಾನಿಯುಂಟು ಮಾಡಿದೆ ಎಂದಿದ್ದಾರೆ. 
ಭಾರತೀಯ ಸೇನೆ ನಡೆಸಿದ ಫಿರಂಗಿ ದಾಳಿಗೆ ಪಾಕಿಸ್ತಾನಿ ಸೇನೆಯ ಬಂಕರ್ ಗಳು ಕೂಡ ಹಾನಿಗೊಂಡಿವೆ ಎಂದು ತಿಳಿಯಲಾಗಿದೆ. 
ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕರು ನುಸುಳಲು ಸಹಕರಿಸುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಎತ್ತರದ ಸ್ಥಾನಗಳಲ್ಲಿ ಹಿಮ ಕರಗುವುದರಿಂದ ಇದು ಹೆಚ್ಚಳಗೊಳ್ಳಲಿದೆ ಎನ್ನಲಾಗಿದೆ. 
"ಗಡಿ ನಿಯಂತ್ರಣ ರೇಖೆಯಲ್ಲಿ ನುಸುಳುವಿಕೆಯನ್ನು ತಡೆಗಟ್ಟುವ ಭಯೋತ್ಪಾದಕ ವಿರೋಧಿ ತಂತ್ರಗಾರಿಕೆಯ ಭಾಗವಾಗಿ ಈ ದಾಳಿ ನಡೆದಿದೆ" ಎಂದು ಮೇಜರ್ ಜನರಲ್ ನರುಲಾ ಹೇಳಿದ್ದಾರೆ. 

ಭಾರತಕೆ ಎನ್‌ಎಸ್‌ಜಿ ಸದಸ್ಯತ್ವಕ್ಕೆ ನಿಲುವು ಬದಲಿಸುವುದಿಲ್ಲ ಎಂದು ಚೀನಾ!?

ಬೀಜಿಂಗ್: ಭಾರತವೂ ಸೇರಿ ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದ ರಾಷ್ಟ್ರಗಳನ್ನು ಪರಮಾಣು ಪೂರೈಕೆದಾರರ ಗುಂಪಿಗೆ (ಎನ್‌ಎಸ್‌ಜಿ) ಸೇರಿಸುವ ವಿಚಾರದಲ್ಲಿ ನಿಲುವು ಬದಲಿಸುವುದಿಲ್ಲ ಎಂದು ಚೀನಾ ಹೇಳಿದೆ.

ಭಾರತವನ್ನು ಗುಂಪಿಗೆ ಸೇರಿಸಲು ಚೀನಾದ ಸಮ್ಮತಿಯೂ ಅಗತ್ಯವಾಗಿದ್ದು, ಹಿಂದಿನಿಂದಲೂ ಅದು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. 48 ಸದಸ್ಯ ರಾಷ್ಟ್ರಗಳ ಎನ್‌ಎಸ್‌ಜಿ ಸಭೆ ಮುಂದಿನ ತಿಂಗಳು ಸ್ವಿಜರ್ಲೆಂಡ್‌ನ ರಾಜಧಾನಿ ಬರ್ನ್‌ನಲ್ಲಿ ನಡೆಯಲಿರುವುದರಿಂದ ಚೀನಾದ ಈ ಹೇಳಿಕೆ ಮಹತ್ವ ಪಡೆದಿದೆ.

‘ಸದಸ್ಯ ರಾಷ್ಟ್ರಗಳಲ್ಲಿ ಒಮ್ಮತ ಮೂಡಿಸುವುದು ಮತ್ತು ಪಾರದರ್ಶಕ ವ್ಯವಹಾರಕ್ಕೆ ಒತ್ತು ನೀಡುವ ಬಗ್ಗೆ 2016ರಲ್ಲಿ ಸೋಲ್‌ನಲ್ಲಿ ನಡೆದಿದ್ದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಕ್ಕೆ ನಮ್ಮ ಬೆಂಬಲವಿದೆ’ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ಭಾರತವು ಮನವಿ ಸಲ್ಲಿಸಿದ ಬೆನ್ನಲ್ಲೇ ಚೀನಾದ ಬೆಂಬಲದೊಂದಿಗೆ ಪಾಕಿಸ್ತಾನವೂ ಸದಸ್ಯತ್ವಕ್ಕೆ ಮನವಿ ಸಲ್ಲಿಸಿತ್ತು. ಭಾರತಕ್ಕೆ ಅಮೆರಿಕ ಬಲವಾದ ಬೆಂಬಲ ನೀಡಿದೆ. ಆದರೆ, ಹೊಸ ರಾಷ್ಟ್ರಗಳಿಗೆ ಸದಸ್ಯತ್ವ ನೀಡಬೇಕಾದರೆ ಅವುಗಳು ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕಲೇಬೇಕು ಎಂಬುದು ಚೀನಾದ ವಾದವಾಗಿದೆ. ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಭಾರತ ಸಹಿ ಹಾಕಿಲ್ಲ. ಒಪ್ಪಂದದಲ್ಲಿರುವ ತಾರತಮ್ಯ ನಿವಾರಿಸಿದರೆ ಸಹಿ ಹಾಕುವುದಾಗಿ ಭಾರತ ಹೇಳಿದೆ.

ಪಾಕಿಸ್ತಾನದ ಬಳಿ ಭಾರತೀಯ ನೋಟುಗಳನ್ನು ಮುದ್ರಿಸುವ 5 ಪ್ರೆಸ್ ಗಳು!

ಮೇಜರ್ ಜನರಲ್ ಗಗನ್ ದೀಪ್ ಭಕ್ಷಿಯವರ ಪ್ರಕಾರ, ಪಾಕಿಸ್ತಾನದ ಬಳಿ
15,000,000,000,000(15 ಟ್ರಿಲಿಯನ್) ನಷ್ಟು ಭಾರತೀಯ ನೋಟುಗಳನ್ನು ಮುದ್ರಿಸುವ 5 ಪ್ರೆಸ್ ಗಳು ಸಿದ್ದವಾಗಿದ್ದವು. ಅದು ಆರ್ಥಿಕ ಪರ್ಲ ಹಾರ್ಬರನ ಸೃಷ್ಚಿಸುವುದರಲ್ಲಿತ್ತು.

ಜಮ್ಮು-ಕಾಶ್ಮೀರ ಹಾಗೂ ಭಾರತದ ಇತರ ಭಾಗಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಮೀತಿ ಮೀರಿ ಹೆಚ್ಚಾಗುವ ಎಲ್ಲ ಲಕ್ಷಣಗಳಿದ್ದವು. ಗುಪ್ತಚರದಳದಿಂದ ದೊರೆತ ಮಾಹಿತಿ ಮೋದಿಜಿಯವರಿಗೆ ಸಿಕ್ಕಾಗ, ಅವರು ಮಾಡು ಇಲ್ಲವೆ ಮಡಿ ಅನ್ನುವ ಸ್ಥಿತಿಯಲ್ಲಿದ್ದರು. ತಕ್ಷಣ ಕಾರ್ಯೋನ್ಮುಖರಾದ ಅವರು ಅದರ ಬಗ್ಗೆ ಸಂಪೂರ್ಣ ಜ್ಞಾನವಿರುವ ಕೆಲವೇ ವ್ಯಕ್ತಿಗಳೊಡನೆ  ಸಮಾಲೋಚಿಸಿ ತಕ್ಷಣವೇ ನೋಟ ಬ್ಯಾನ್ ನಂಥ ದೊಡ್ಡ ಕ್ರಮಕ್ಕೆ ಮುಂದಾದರು.

ಆಗ ಅವರ ಮನಸ್ಸಿನಲ್ಲಿದ್ದದ್ದು ಕೇವಲ ಭಾರತ ದೇಶ ಮತ್ತು ಭಾರತೀಯರು ಮಾತ್ರ. ಇದು ತಮ್ಮ ರಾಜಕೀಯ ಜೀವನವನ್ನೆ ಕೊನೆಗಳಿಸಬಹುದು ಎನ್ನುವ ಅರಿವು ಇತ್ತು. 2019 ಚುನಾವಣೆಯೇ ತಮ್ಮ ಕೊನೆಯ ಚುನಾವಣೆಯಾಗಬಹುದು ಎನ್ನುವುದು ಅವರಿಗೆ ತಿಳಿದಿತ್ತು. ಆದರೆ ರಾಷ್ಟ್ರಪ್ರೇಮದ ಮುಂದೆ ಸ್ವಾರ್ಥ ಸತ್ತು ಹೋಯಿತು. ಹೆಜ್ಜೆ ಇಟ್ಟೂ ಆಯಿತು. ಸಾಮಾನ್ಯ ಜನರಿಗೆ ತೊಂದರೆಯೂ ಆಯಿತು. ವಿರೋಧ ಪಕ್ಷಗಳು ಇದನ್ನೆ ಅಸ್ತ್ರವಾಗಿಸಿಕೊಂಡು ಅವರ ಮನೋಸ್ತೈರ್ಯವನ್ನು  ಕುಗ್ಗಿಸುವ ಪ್ರಯತ್ನವನ್ನೂ ಮಾಡಿದವು. ಆದರೆ ಮೋದಿಜಿಯವರು ಆತಂಕ ಪಡಲಿಲ್ಲ. 

ತಾವು ಇಟ್ಟ ಹೆಜ್ಜೆಯ ಬಗ್ಗೆ ತಳಮಳಗೊಳ್ಳಲಿಲ್ಲ. ಆದರೆ ಒಬ್ಬ ನಿಜವಾದ ಭಾರತೀಯನಾದವನು ಅವರನ್ನು ಒಪ್ಪಿಕೊಳ್ಳಲೇಬೇಕು ಭಾರತವು ನಿಜವಾಗಲೂ ಒಬ್ಬ ಸಮರ್ಥ ವ್ಯಕ್ತಿಯ ಕೈಯ್ಯಲ್ಲಿದೆ ಎಂದು ಹೆಮ್ಮೆ ಪಡಲೇಬೇಕು.
ಈ ವಿಷಯವನ್ನು ಎಲ್ಲರೂ ಗಂಬೀರವಾಗಿ ಯೋಚಿಸಿ ಇಲ್ಲಿರುವ ವಿಷಯ ಓದಿ ಸುಮ್ಮನಾಗುವಂತದ್ದಲ್ಲ  ನೋಟ್ ಬ್ಯಾನ್ ಆಗದೆ  ಇದ್ದಿದ್ದಲ್ಲಿ  ಆಗುತ್ತಿದ್ದ ಅನಾಹುತ ಅಂದಾಜಿಸಿಕೊಳ್ಳಿ ಭಾರತ ದಿವಾಳಿಯಾಗುತ್ತಿತ್ತು......ಅರಾಜಕತೆ ತಾಂಡವವಾಡುತ್ತಿತ್ತು  ಜನರು ದಂಗೆ ಏಳುವಂತಾಗುತ್ತಿತ್ತು..... ಆದರೆ ಭಾರತವನ್ನು ಈ ಎಲ್ಲ ಅಪಾಯಗಳಿಂದ ಕಾಪಾಡಿದ  ಆ ದೇವತಾಮನುಷ್ಯನನ್ನು ಭಾರತದಲ್ಲೇ ಇರುವ  ಗೋಮುಖ ವ್ಯಾಘ್ರಗಳು ಹೇಗೆಲ್ಲಾ ನಿಂದಿಸುತ್ತವೆ,

ನೋಟ್ ಬ್ಯಾನ್ ನಂತರ ಮೋದಿಯವರ ಗೋವಾ ಭಾಷಣವನ್ನು ನೆನಪಿಸಿಕೊಳ್ಳಿ   ಅಂದು ನಾನು ಕಂಡದ್ದು ಮೋದಿಯವರೇನಾ ಎನ್ನುವಷ್ಟು ಭಾವುಕರಾಗಿದ್ದರು ..... ಭಾರತದ ಒಳಗೂ ಹೊರಗೂ ಶತ್ರುಗಳನ್ನು ಕಟ್ಟಿಕೊಂಡಿದ್ದ ಅವರು  ಆತಂಕಗೊಂಡಿದ್ದುದು  ಅಗತ್ಯಕ್ಕಿಂತ ಸ್ಪಷ್ಟವಾಗಿ ಕಾಣುತ್ತಿತ್ತು.....ಬಹುಶಃ ಆತನಿಗೆ ನಾನು ಕೊಲ್ಲಲ್ಪಡುವೆನೆಂಬ ಭಯಕ್ಕಿಂತ   ಈ ದೇಶವನ್ನು  ಸರಿದಾರಿಗೆ ತರುವ ಪ್ರಯತ್ನದಲ್ಲಿ ಸಾಧನೆಗಿಂತ  ಮೊದಲೇ ಹತನಾಗಬಹುದೇ ಎಂಬ ಆತಂಕ ಖಂಡಿತ ಇತ್ತು

ಬಿಜೆಪಿಯ ಮಿಷನ್-150 ಗುರಿಗೆ ಯೋಗಿ ಸಾಥ್!?

ಬೆಂಗಳೂರು: 2018ರ ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಮಿಷನ್-150 ಗುರಿಯಾಗಿಸಿಕೊಂಡಿರುವ ಬಿಜೆಪಿ ಚುನಾವಣೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕರೆ ತರಲು ಚಿಂತನೆ ನಡೆಸುತ್ತಿದೆ.
ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿರುವ ಬಿಜೆಪಿ 2018ರ ವಿಧಾನ ಸಭೆ ಚುನಾವಣೆಯಲ್ಲಿ, ಈಗಾಗಲೇ ಹಲವು ಜನಪ್ರಿಯ ಕಾರ್ಯಕ್ರಮಗಳಿಂದ ಪ್ರಸಿದ್ಧವಾಗಿರುವ ಯೋಗಿ ಆದಿತ್ಯನಾಥ್ ಅವರನ್ನು ರಾಜ್ಯ ಚುನಾವಣಾ ಪ್ರಚಾರಕ್ಕೆ ಕರೆ ತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಅವರ ಮೂಲಕ ಯೋಗಿ ಆದಿತ್ಯ ನಾಥ್ ಅವರಿಗೆ ಮನವಿ ಸಲ್ಲಿಸಿ ಕರೆತರಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ. 
ನರೇಂದ್ರ ಮೋದಿ ಸರ್ಕಾರದ ಮೂರು ವರ್ಷದ ಆಡಳಿತಾವಧಿಯ ಸಾಧನೆಗಳನ್ನು ರಾಜ್ಯದಲ್ಲಿ 50 ಸ್ಥಳಗಳಲ್ಲಿ  ಸಾಧನೆ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಅಮೇರಿಕಾದ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಮತ್ತಷ್ಟು ಹೆಚ್ಚಿದೆ.ಉತ್ತರ ಕೊರಿಯಾ



ಉತ್ತರ ಕೊರಿಯಾ; ಸೋಮವಾರ ಯಶಸ್ವಿಯಾಗಿ ಅಮೇರಿಕಾದ ಗುರಿಗಳನ್ನು ಹೊಡೆಯುವ ಸಾಮರ್ಥ್ಯದ ಮತ್ತಷ್ಟು ಪ್ರಯೋಜನಗಳನ್ನು ಸೂಚಿಸುತ್ತದೆ, ಪರಮಾಣು ಸಿಡಿತಲೆ ಆಫ್ ಕೊನೆಯ ಹಂತದ ಮಾರ್ಗದರ್ಶನ ವಿಶ್ವಾಸಾರ್ಹತೆ ದೃಢೀಕರಿಸಲು ಇರುವ Intermediate- ರೇಂಜ್ ಖಂಡಾಂತರ ಕ್ಷಿಪಣಿ ಪರೀಕ್ಷಿಸಲಾಯಿತು.

ಉತ್ತರ ಕೊರಿಯಾ ಹೇಳಿದರು KCNA ಸುದ್ದಿ ಸಂಸ್ಥೆ ನಾಯಕ ಕಿಮ್ ಜೊಂಗ್ ಅನ್ ಉದಾಹರಣೆಗಳು Pukguksong-2 ಕ್ಷಿಪಣಿ ಘನ-ಇಂಧನ ಎಂಜಿನ್ ಕಾರ್ಯನಿರ್ವಹಣೆಯ ಪರಿಶೀಲಿಸಿದ ಮತ್ತು ಕ್ಷೇತ್ರ ಕ್ರಿಯೆಯಲ್ಲಿ ನಿಯೋಜನೆ ಅದನ್ನು ಆದೇಶ ಇದು ಪರೀಕ್ಷಾ ಮೇಲ್ವಿಚಾರಣೆ ಹೇಳಿದರೆ.

ಉತ್ತರ ಕೊರಿಯಾ ಶಸ್ತ್ರಾಸ್ತ್ರಗಳ ಕಾನೂನುಬದ್ಧ ಸ್ವಯಂ ರಕ್ಷಣೆಯ ಅಗತ್ಯವಿದೆ ಹೇಳುವ ಸಹ ಚೀನಾ, ಒಂಟಿ ಪ್ರಮುಖ ಮಿತ್ರ, ತನ್ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ಬಿಂಬಿಸಲು ಎಲ್ಲಾ ಕರೆಗಳನ್ನು ಉಲ್ಲಂಘಿಸಿದ್ದಾರೆ.ಉತ್ತರ ಕೊರಿಯಾ ಕಳೆದ ಒಂದು ವಾರದ ಹಿಂದೆ ಕ್ಷಿಪ್ತ ಕ್ಷಿಪಣಿ ಪರೀಕ್ಷೆ ನಡೆಸಿದ.

"ಹಿಟ್ಸ್ ಪ್ರೈಡ್ ಕ್ಷಿಪಣಿಯು ದರದಲ್ಲಿ ಸೇಯಿಂಗ್ ನಿಖರವಾದ ಮತ್ತು pukguksong -2 ಯಶಸ್ವಿ ಆಯಕಟ್ಟಿನ ವೆಪನ್, ಅವರು ಕ್ರಿಯೆಗೆ ಈ ಆಯುಧ ಪದ್ಧತಿಯನ್ನು ನಿಯೋಜನೆಯ ಅನುಮೋದನೆ" KCNA ಉಲ್ಲೇಖಿಸಿ ನಾಯಕ ಕಿಮ್ ಜಾನ್ ಅನ್ ಹೇಳಿದರು ...

ಲಾಂಚ್ ವಿಶ್ವಾಸಾರ್ಹತೆ ಮತ್ತು ಘನ-ಇಂಧನ ಎಂಜಿನ್ ಕಾರ್ಯಾಚರಣೆಯನ್ನು ಮತ್ತು ವೇದಿಕೆಯ ವಾಸ ಮತ್ತು ಸಿಡಿತಲೆ ಇರುವ ಸಾಧನವು ಧ್ವನಿಮುದ್ರಿಸಲಾಯಿತು ಪರಮಾಣು ಸಿಡಿತಲೆ ಆಫ್ ಕೊನೆಯ ಹಂತದ ಮಾರ್ಗದರ್ಶನ ನಿಖರತೆ ಪರಿಶೀಲಿಸಿ.  KCNA ಹೇಳಿದೇ.


ವೈಟ್ ಹೌಸ್ ಲಾಂಚ್ ಆಫ್ ಅವೇರ್


ಸೌದಿ ಅರೇಬಿಯಾದಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಅಧಿಕೃತ ಪ್ರಯಾಣ ವೈಟ್ ಹೌಸ್ಗೆ ಇತ್ತೀಚಿನ ಬಿಡುಗಡೆ ಅರಿವಿತ್ತು ಮತ್ತು ಕ್ಷಿಪಣಿ ಉತ್ತರ ಕೊರಿಯಾ ಪರೀಕ್ಷಿಸಿದರು ಮೂರು ಹಿಂದಿನ ಕ್ಷಿಪಣಿಗಳು ಕುಳ್ಳಗಿನ ವ್ಯಾಪ್ತಿಯನ್ನು ಹೊಂದಿತ್ತು ಗಮನಿಸಿದರು ಹೇಳಿದರು.

ಕಾರ್ಯದರ್ಶಿಯವರಾದ ರಾಜ್ಯದ ರೆಕ್ಸ್ ಟಿಲ್ಲರ್ಸನ್ ಆರ್ಥಿಕ ಮತ್ತು ರಾಜತಾಂತ್ರಿಕ ಒತ್ತಡವನ್ನು ಉತ್ತರ ಕೊರಿಯಾವು ಅನ್ವಯವಾಗುತ್ತದೆ.

ಒಂದು ವಾರದಲ್ಲಿ ಎರಡು ಕ್ಷಿಪಣಿ ಪರೀಕ್ಷೆಗಳು ಪರ್ಯಾಯ ದ್ವೀಪದಲ್ಲಿ ಒತ್ತಡವನ್ನು ಕಡಿಮೆ ರೀತಿಯಲ್ಲಿ ಹುಡುಕುವುದು ದಕ್ಷಿಣ ಕೊರಿಯಾದ ಹೊಸ ಅಧ್ಯಕ್ಷ ಚಂದ್ರನ ಜೇ ಇನ್ ಯೋಜನೆಗಳನ್ನು ಸಂಕೀರ್ಣಗೊಳಿಸೀತು.

ಚಂದ್ರನ ಯಾವುದೇ ಶಾಂತಿ ಒಪ್ಪಂದ ತಮ್ಮ 1950-1953 ಸಂಘರ್ಷ ಕೊನೆಯಲ್ಲಿ ಸಹಿ ರಿಂದ ಯುದ್ಧದಲ್ಲಿ ತಾಂತ್ರಿಕವಾಗಿ ಇನ್ನೂ ಯಾವ ಸುಧಾರಣೆ ಕಂಡಿಲ್ಲ, ಚುನಾವಣೆಯಲ್ಲಿ ಗೆದ್ದ ನಂತರ ಮೇ 10 ರಂದು ಅಧಿಕಾರ ವಹಿಸಿಕೊಂಡಿತು.


560 ಕಿಲೋಮೀಟರ್ ಆಫ್ ಕ್ಷಿಪಣಿ ತಲುಪಿದೆ ಆಲ್ಟಿಟ್ಯೂಡ್


ಕ್ಷಿಪಣಿ 560 ಕಿಲೋಮೀಟರ್ ಗಳಷ್ಟು ಎತ್ತರದಲ್ಲಿ ಹಾರಿ ಸುಮಾರು 500 ಕಿಲೋಮೀಟರ್ (310.69) ಮೈಲ್ಸ್ ಮತ್ತು ಉತ್ತರ ಪೂರ್ವ ತೀರದಲ್ಲಿ ನೀರಿನಲ್ಲಿ ಬಿದೀದೇ, ದಕ್ಷಿಣ ಕೊರಿಯಾದ ಸೇನಾ ಹೇಳಿದೆ.

ಏಕಾಂಗಿ ರಾಜ್ಯ ಅಮೇರಿಕಾದ ಪ್ರಧಾನ ಭೂಮಿ ಹೊಡೆಯುವ ಸಾಮರ್ಥ್ಯ ಅಣ್ವಸ್ತ್ರ ಸಜ್ಜಿತ ಕ್ಷಿಪಣಿ ಅಭಿವೃದ್ಧಿ ಕಾರ್ಯಪ್ರವೃತ್ತವಾಗಿದೆ. ಶನಿವಾರ, ಪಶ್ಚಿಮ ಕ್ಷಿಪಣಿ ತಜ್ಞರು ಶಾಂತ ಉತ್ಪ್ರೇಕ್ಷಿತ ಹೇಳುತ್ತಾರೆ ಆದರೂ, ಹೊಡೆಯಲು ಅಮೇರಿಕಾದ ಮುಖ್ಯಭೂಮಿ ಸಾಮರ್ಥ್ಯವನ್ನು ಅಭಿವೃದ್ಧಿ ತಿಳಿಸಿದರು.

ಸೋಮವಾರ, ಹೇಳಿದರು KCNA ಇತ್ತೀಚಿನ ಪರೀಕ್ಷೆ ವ್ಯಾಪ್ತಿಯಲ್ಲಿ ಹವಾಯಿ ಮತ್ತು ಅಲಾಸ್ಕಾ ಹಾಕಿ ಮತ್ತೊಂದು ಕ್ಷಿಪಣಿ ಯಶಸ್ವಿ ಪರೀಕ್ಷೆ ಏದು ಹೇಳಿದೆ.



ಪ್ರತಿಕ್ರಿಯೆಗೆ ಧನ್ಯವಾದಗಳು. ದಯವಿಟ್ಟು ಲೈಕ್ ಮಾಡಿ, ಹಂಚಿಕೊಳ್ಳಿ ಮತ್ತು ಚಂದಾದಾರರಾಗಿ.

ಹುತಾತ್ಮ ಯೋಧರ ಕುಟುಂಬಕ್ಕೆ 1 ಕೋಟಿ ಪರಿಹಾರ-ರಾಜನಾಥ್‌ ಸಿಂಗ್‌


''ನಮ್ಮ ಯೋಧರ ತ್ಯಾಗ, ಬಲಿದಾನಗಳಿಗೆ ಹಣದ ಮೂಲಕ ಪರಿಹಾರ ತುಂಬಲು ಸಾಧ್ಯವಿಲ್ಲ. ಆದರೆ ಹುತಾತ್ಮರ ಕುಟುಂಬದವರು ಯಾವುದೇ ತೊಂದರೆ ಅನುಭವಿಸಬಾರದು. ಹೀಗಾಗಿ ಪ್ರತಿ ಪ್ಯಾರಾ ಮಿಲಿಟರಿ ಯೋಧರ ಕುಟುಂಬದವರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು,'' ಎಂದು ಹೇಳಿದರು.

ಕರ್ತವ್ಯದ ವೇಳೆ ಹುತಾತ್ಮರಾಗುವ ಅರೆ ಸೇನಾಪಡೆ ಯೋಧರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಲಾಗುವುದು ಎಂದು ಗೃಹ ಸಚಿವ ರಾಜನಾಥ್‌ ಸಿಂಗ್‌ ಘೋಷಿಸಿದ್ದಾರೆ.
34,000 ಅರೆ ಸೇನಾಪಡೆ ಪೇದೆಗಳನ್ನು ಮುಖ್ಯ ಪೇದೆಗಳ ಹುದ್ದೆಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ಸಹ ಅವರು ಪ್ರಕಟಿಸಿದ್ದಾರೆ. ಇಲ್ಲಿನ ಶೆರತಂಗ್‌ ಗಡಿ ಔಟ್‌ಪೋಸ್ಟ್‌ನಲ್ಲಿ ಶನಿವಾರ 'ಇಂಡೊ-ಟಿಬೆಟ್‌ ಗಡಿ ಪೊಲೀಸ್‌ ಪಡೆ'ಯ (ಐಟಿಬಿಪಿ) ಸೈನಿಕ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ಅರೆ ಸೇನಾಪಡೆ ಯೋಧರ ತ್ಯಾಗ, ಬಲಿದಾನಗಳ ಬಗ್ಗೆ ದೇಶ ಹೆಮ್ಮೆಪಡುತ್ತದೆ ಎಂದು ಹೇಳಿದರು.

150 ಕೋಟಿ ಗಣಿ ಕಪ್ಪ. ಮೂರು ವಾರದಲ್ಲಿ ಸಾಕ್ಷ್ಯ ಸಲಿಸುತ್ತೆನೆ-ಜನಾರ್ದನ ರೆಡ್ಡಿ

ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಮಾಡಿರುವ ರೂ.150 ಕೋಟಿ ಗಣಿ ಕಪ್ಪದ ಆರೋಪಕ್ಕೆ ಸಂಬಂಧಿಸಿದಂತೆ ಮೂರುವ ವಾರಗಳಲ್ಲಿ ವಿಶೇಷ ತನಿಖಾ ಸಂಸ್ಥೆಗೆ ಸಾಕ್ಷ್ಯ ಸಲ್ಲಿಕೆ ಮಾಡುತ್ತೇನೆಂದು ಬಳ್ಳಾರಿ ಗಣಿ ಧಣಿ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರು ಶುಕ್ರವಾರ ಹೇಳಿದ್ದಾರೆ. 
ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ವಿಶೇಷ ತನಿಖಾ ಸಂಸ್ಥೆ ಸೂಚನೆ ಮೇರೆಗೆ ತನಿಖಾಧಿಕಾರಿಗಳ ಮುಂದೆ ನಿನ್ನೆ ವಿಚಾರಣೆಗೆ ಹಾಜರಾಗಿದ್ದ ರೆಡ್ಡಿ ಅವರು, ತಮ್ಮ ಆರೋಪಕ್ಕೆ ಪೂರಕ ದಾಖಲೆ ನೀಡಲು ಸಮಯಬೇಕು ಎಂಬ ಮನವಿ ಮುಂದಿಟ್ಟರು. ಇದನ್ನು ಪುರಸ್ಕರಿಸಿದ ಅಧಿಕಾರಿಘಳು ಸಮಯ ನೀಡಿದ್ದಾರೆ ಎಂದು ತಿಳಿದುಬಂದಿದೆ. 
ಹೀಗಾಗಿ ಸುಮಾರು 10 ವರ್ಷಗಳ ಹಿಂದಿನ ಈ ಪ್ರಕರಣ ಕುರಿತು ಜನಾರ್ದನರೆಡ್ಡಿ ಯಾವೆಲ್ಲಾ ಸಾಕ್ಷ್ಯಗಳನ್ನು ಒದಗಿಸುತ್ತಾರೆಂಬ ಕುತೂಹಲ ರಾಜ್ಯ ರಾಜಕಾರಣದಲ್ಲಿ ತೀವ್ರವಾಗಿದೆ. ಹೆಬ್ಬಾಳದ ಜಿಕೆವಿಕೆ ಆವರಣದಲ್ಲಿರುವ ಎಸ್ಐಟಿ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಹೊರ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿಯವರು, ಗಣಿಕಪ್ಪ ಆರೋಪದ ಸಿಡಿ ಬಗ್ಗೆ ಅಧಿಕಾರಿಗಳು ಯಾವುದೇ ರೀತಿ ಪ್ರಶ್ನಿಸಲಿಲ್ಲ. ಆದರೆ, ನನ್ನ ಆರೋಪಕ್ಕೆ ಸಂಬಂಧಿದಂತೆ ಸಾಕ್ಷ್ಯಾಧಾರಗಳ ಮಾಹಿತಿ ಕೇಳಿದ್ದಾರೆ. ಈ ಮಾಹಿತಿ ನೀಡಲು ನಾನು ಸಮಯ ಪಡೆದಿದ್ದೇನೆ ಎಂದರು.
3 ವಾರಗಳಲ್ಲಿ ನನ್ನ ಆರೋಪಕ್ಕೆ ಸಾಕ್ಷ್ಯಾಧಾರಗಳನ್ನು ತನಿಖಾ ತಂಡಕ್ಕೆ ಸಲ್ಲಿಕೆ ಮಾಡುತ್ತೇನೆ. ಪ್ರಕರಣದ ತನಿಖೆಗೆ ಸ್ಪಂದಿಸುತ್ತೇನೆಂದು ತಿಳಿಸಿದರು. 
2006ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ವಿಧಾನಪರಿಷತ್ ಸದಸ್ಯರಾಗಿದ್ದ ಜನಾರ್ದನ ರೆಡ್ಡಿಯವರು, ವಿಧಾನಸಭಾ ಅಧಿವೇಶನದಲ್ಲೇ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅರಣ್ಯ ಸಚಿವ ಸಿ.ಚನ್ನಿಗಪ್ಪ ವಿರುದ್ಧ ಬಳ್ಳಾರಿ ಗಣಿ ಮಾಲೀಕರಿಂದ ಹಣ ಸಂಗ್ರಹಿಸಿದ್ದಾರೆಂದು ಆರೋಪಿಸಿದ್ದರು. ಆರೋಪ ಹಿನ್ನಲೆಯಲ್ಲಿ ಎಸ್ಐಟಿ ರೆಡ್ಡಿಯವರಿಗೆ ನೋಟಿಸ್ ಜಾರಿ ಮಾಡಿತ್ತು. 

ಇಲ್ಲಿಯ ಹೆಣ್ಣು ಮಕ್ಕಳ ಕಾಣಿರಿನ ಕಥೆ ‘ಭೇಟಿ ಬಚಾವೋ ಭೇಟಿ ಪಡಾವೋ’

ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಎಲ್ಲರೂ ಸಮಾನರು. ಪುರುಷ- ಮಹಿಳೆ ಎನ್ನುವ ಬೇಧವಿಲ್ಲ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಂಬಿಕೆ ಇದೆ. ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಭೇಟಿ ಬಚಾವೋ ಭೇಟಿ ಪಡಾವೋ’ ಯೋಜನೆ ಜಾರಿಗೆ ತಂದಿದ್ದಾರೆ. ಆದ್ರೆ ಈ ಎಲ್ಲ ಮಾತು, ಯೋಜನೆಗಳು ಕೆಲವೇ ಕೆಲವು ಮಂದಿಗೆ ಮಾತ್ರ ಸೀಮಿತವಾಗಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ ವಿದ್ಯೆ ಕಲಿಯದ ಮಹಿಳೆಯರು ವೇಶ್ಯಾವಾಟಿಕೆಗೆ ಬಲಿಯಾಗುತ್ತಿದ್ದಾರೆ. ದೆಹಲಿಯ ನಜಾಫ್ ಗಡ್ ದ ಪ್ರೇಮ್ ನಗರದಲ್ಲಿ ಅನೇಕ ಮನೆಗಳು ಮಹಿಳೆಯರ ನೋವಿನ ಕಥೆಯನ್ನು ಹೇಳುತ್ತವೆ. ಇಲ್ಲಿನ ಹುಡುಗಿಯರಿಗೆ ಕನಸು ಕಾಣುವ ಸ್ವಾತಂತ್ರ್ಯವೂ ಇಲ್ಲ. ವಿದ್ಯೆ, ಶಾಲೆ ದೂರದ ಮಾತು. ಹೆಣ್ಣು ಹುಟ್ಟುತ್ತಿದ್ದಂತೆ ಹಬ್ಬ ಮಾಡುವ ಜನರು ದುಡಿಮೆಗೊಂದು ತಲೆ ಹೆಚ್ಚಾಯ್ತು ಎಂದುಕೊಳ್ತಾರೆ.

ಇಲ್ಲಿನ ಬಾಲಕಿಯರಿಗೆ 12-13 ವರ್ಷವಾಗ್ತಿದ್ದಂತೆ ಕಾಳ ರಾತ್ರಿಯ ಕತ್ತಲೆ ಕೂಪದಲ್ಲಿ ನರಳೋದು ಮಾಮೂಲಿಯಾಗಿಬಿಡುತ್ತದೆ. ಮಗಳು ದೊಡ್ಡವಳಾಗ್ತಿದ್ದಂತೆ ತಂದೆ-ತಾಯಿ ಆಕೆಯನ್ನು ವೇಶ್ಯಾವಾಟಿಕೆಗೆ ದೂಡುತ್ತಾರೆ. ಅದೇ ಸಮುದಾಯದ ಪುರುಷನ ಕೈ ಹಿಡಿದು ಹೊಸ ಮನೆ ಹೊಸಿಲು ದಾಟಿದ ಮಹಿಳೆಗೂ ನೆಮ್ಮದಿಯಿಲ್ಲ. ಮನೆಗೆ ಬಂದ ಸೊಸೆಗೆ ಗ್ರಾಹಕರನ್ನು ಹುಡುಕುವ ಕೆಲಸ ಗಂಡನ ಮನೆಯವರದ್ದು.

ಹಗಲು ಮನೆ ನೋಡಿಕೊಳ್ಳುವ ಮಹಿಳೆ ರಾತ್ರಿಯಾದ್ರೆ ಗ್ರಾಹಕರ ಜೊತೆ ಮಲಗಬೇಕು. ರಾತ್ರಿ ಎರಡು ಗಂಟೆ ಸುಮಾರಿಗೆ ಮನೆ ಬಿಡುವ ಮಹಿಳೆ ಬೆಳಗಾಗುವವರೆಗೆ 3-4 ಗ್ರಾಹಕನ ಜೊತೆಗಿರುತ್ತಾಳೆ. ಮೊದಲೇ ಗ್ರಾಹಕರ ಬುಕ್ಕಿಂಗ್ ಆಗಿರುತ್ತದೆ. ಸಾಕಷ್ಟು ಭಾರಿ ಇದಕ್ಕೆ ವಿರೋಧ ವ್ಯಕ್ತವಾಗಿದೆ. ವೇಶ್ಯಾವಾಟಿಕೆ ನಡೆಸಲು ಒಲ್ಲೆ ಎಂದ ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡಿದ್ದಿದೆ. ತನ್ನ ಮಗಳಿಗೆ ವಿದ್ಯೆ ನೀಡಿ ಆಕೆಗೆ ಉತ್ತಮ ಭವಿಷ್ಯ ನೀಡಬೇಕೆಂಬ ಕನಸು ಅನೇಕ ತಾಯಂದಿರಿಗಿದೆ. ಆದ್ರೆ ಅದು ಈಡೇರುತ್ತಿಲ್ಲ. ‘ಭೇಟಿ ಬಚಾವೋ ಭೇಟಿ ಪಡಾವೋ’ ಯೋಜನೆಗಳು ಇಲ್ಲಿಯವರೆಗೆ ತಲುಪುತ್ತಿಲ್ಲ.

Featured Post

ಪ್ರಿಯಾಂಕ ಗಾಂಧಿಗೆ ಕರ್ನಾಟಕ ಚುನಾವಣಾ ಜವಾಬ್ದಾರಿ...!

ಮುಂದಿನ ವರ್ಷ ಕರ್ನಾಟಕ, ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದ್ದು, ಈ ಎರಡು ರಾಜ್ಯಗಳ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಮಹತ್ವವಾಗಿದೆ. ಚುನಾವಣೆಯಲ್ಲಿ ಗೆಲುವು ಪಡೆಯುವ ದೃ...