150 ಕೋಟಿ ಗಣಿ ಕಪ್ಪ. ಮೂರು ವಾರದಲ್ಲಿ ಸಾಕ್ಷ್ಯ ಸಲಿಸುತ್ತೆನೆ-ಜನಾರ್ದನ ರೆಡ್ಡಿ

ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಮಾಡಿರುವ ರೂ.150 ಕೋಟಿ ಗಣಿ ಕಪ್ಪದ ಆರೋಪಕ್ಕೆ ಸಂಬಂಧಿಸಿದಂತೆ ಮೂರುವ ವಾರಗಳಲ್ಲಿ ವಿಶೇಷ ತನಿಖಾ ಸಂಸ್ಥೆಗೆ ಸಾಕ್ಷ್ಯ ಸಲ್ಲಿಕೆ ಮಾಡುತ್ತೇನೆಂದು ಬಳ್ಳಾರಿ ಗಣಿ ಧಣಿ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರು ಶುಕ್ರವಾರ ಹೇಳಿದ್ದಾರೆ. 
ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ವಿಶೇಷ ತನಿಖಾ ಸಂಸ್ಥೆ ಸೂಚನೆ ಮೇರೆಗೆ ತನಿಖಾಧಿಕಾರಿಗಳ ಮುಂದೆ ನಿನ್ನೆ ವಿಚಾರಣೆಗೆ ಹಾಜರಾಗಿದ್ದ ರೆಡ್ಡಿ ಅವರು, ತಮ್ಮ ಆರೋಪಕ್ಕೆ ಪೂರಕ ದಾಖಲೆ ನೀಡಲು ಸಮಯಬೇಕು ಎಂಬ ಮನವಿ ಮುಂದಿಟ್ಟರು. ಇದನ್ನು ಪುರಸ್ಕರಿಸಿದ ಅಧಿಕಾರಿಘಳು ಸಮಯ ನೀಡಿದ್ದಾರೆ ಎಂದು ತಿಳಿದುಬಂದಿದೆ. 
ಹೀಗಾಗಿ ಸುಮಾರು 10 ವರ್ಷಗಳ ಹಿಂದಿನ ಈ ಪ್ರಕರಣ ಕುರಿತು ಜನಾರ್ದನರೆಡ್ಡಿ ಯಾವೆಲ್ಲಾ ಸಾಕ್ಷ್ಯಗಳನ್ನು ಒದಗಿಸುತ್ತಾರೆಂಬ ಕುತೂಹಲ ರಾಜ್ಯ ರಾಜಕಾರಣದಲ್ಲಿ ತೀವ್ರವಾಗಿದೆ. ಹೆಬ್ಬಾಳದ ಜಿಕೆವಿಕೆ ಆವರಣದಲ್ಲಿರುವ ಎಸ್ಐಟಿ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಹೊರ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿಯವರು, ಗಣಿಕಪ್ಪ ಆರೋಪದ ಸಿಡಿ ಬಗ್ಗೆ ಅಧಿಕಾರಿಗಳು ಯಾವುದೇ ರೀತಿ ಪ್ರಶ್ನಿಸಲಿಲ್ಲ. ಆದರೆ, ನನ್ನ ಆರೋಪಕ್ಕೆ ಸಂಬಂಧಿದಂತೆ ಸಾಕ್ಷ್ಯಾಧಾರಗಳ ಮಾಹಿತಿ ಕೇಳಿದ್ದಾರೆ. ಈ ಮಾಹಿತಿ ನೀಡಲು ನಾನು ಸಮಯ ಪಡೆದಿದ್ದೇನೆ ಎಂದರು.
3 ವಾರಗಳಲ್ಲಿ ನನ್ನ ಆರೋಪಕ್ಕೆ ಸಾಕ್ಷ್ಯಾಧಾರಗಳನ್ನು ತನಿಖಾ ತಂಡಕ್ಕೆ ಸಲ್ಲಿಕೆ ಮಾಡುತ್ತೇನೆ. ಪ್ರಕರಣದ ತನಿಖೆಗೆ ಸ್ಪಂದಿಸುತ್ತೇನೆಂದು ತಿಳಿಸಿದರು. 
2006ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ವಿಧಾನಪರಿಷತ್ ಸದಸ್ಯರಾಗಿದ್ದ ಜನಾರ್ದನ ರೆಡ್ಡಿಯವರು, ವಿಧಾನಸಭಾ ಅಧಿವೇಶನದಲ್ಲೇ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅರಣ್ಯ ಸಚಿವ ಸಿ.ಚನ್ನಿಗಪ್ಪ ವಿರುದ್ಧ ಬಳ್ಳಾರಿ ಗಣಿ ಮಾಲೀಕರಿಂದ ಹಣ ಸಂಗ್ರಹಿಸಿದ್ದಾರೆಂದು ಆರೋಪಿಸಿದ್ದರು. ಆರೋಪ ಹಿನ್ನಲೆಯಲ್ಲಿ ಎಸ್ಐಟಿ ರೆಡ್ಡಿಯವರಿಗೆ ನೋಟಿಸ್ ಜಾರಿ ಮಾಡಿತ್ತು. 

ಇಲ್ಲಿಯ ಹೆಣ್ಣು ಮಕ್ಕಳ ಕಾಣಿರಿನ ಕಥೆ ‘ಭೇಟಿ ಬಚಾವೋ ಭೇಟಿ ಪಡಾವೋ’

ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಎಲ್ಲರೂ ಸಮಾನರು. ಪುರುಷ- ಮಹಿಳೆ ಎನ್ನುವ ಬೇಧವಿಲ್ಲ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಂಬಿಕೆ ಇದೆ. ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಭೇಟಿ ಬಚಾವೋ ಭೇಟಿ ಪಡಾವೋ’ ಯೋಜನೆ ಜಾರಿಗೆ ತಂದಿದ್ದಾರೆ. ಆದ್ರೆ ಈ ಎಲ್ಲ ಮಾತು, ಯೋಜನೆಗಳು ಕೆಲವೇ ಕೆಲವು ಮಂದಿಗೆ ಮಾತ್ರ ಸೀಮಿತವಾಗಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ ವಿದ್ಯೆ ಕಲಿಯದ ಮಹಿಳೆಯರು ವೇಶ್ಯಾವಾಟಿಕೆಗೆ ಬಲಿಯಾಗುತ್ತಿದ್ದಾರೆ. ದೆಹಲಿಯ ನಜಾಫ್ ಗಡ್ ದ ಪ್ರೇಮ್ ನಗರದಲ್ಲಿ ಅನೇಕ ಮನೆಗಳು ಮಹಿಳೆಯರ ನೋವಿನ ಕಥೆಯನ್ನು ಹೇಳುತ್ತವೆ. ಇಲ್ಲಿನ ಹುಡುಗಿಯರಿಗೆ ಕನಸು ಕಾಣುವ ಸ್ವಾತಂತ್ರ್ಯವೂ ಇಲ್ಲ. ವಿದ್ಯೆ, ಶಾಲೆ ದೂರದ ಮಾತು. ಹೆಣ್ಣು ಹುಟ್ಟುತ್ತಿದ್ದಂತೆ ಹಬ್ಬ ಮಾಡುವ ಜನರು ದುಡಿಮೆಗೊಂದು ತಲೆ ಹೆಚ್ಚಾಯ್ತು ಎಂದುಕೊಳ್ತಾರೆ.

ಇಲ್ಲಿನ ಬಾಲಕಿಯರಿಗೆ 12-13 ವರ್ಷವಾಗ್ತಿದ್ದಂತೆ ಕಾಳ ರಾತ್ರಿಯ ಕತ್ತಲೆ ಕೂಪದಲ್ಲಿ ನರಳೋದು ಮಾಮೂಲಿಯಾಗಿಬಿಡುತ್ತದೆ. ಮಗಳು ದೊಡ್ಡವಳಾಗ್ತಿದ್ದಂತೆ ತಂದೆ-ತಾಯಿ ಆಕೆಯನ್ನು ವೇಶ್ಯಾವಾಟಿಕೆಗೆ ದೂಡುತ್ತಾರೆ. ಅದೇ ಸಮುದಾಯದ ಪುರುಷನ ಕೈ ಹಿಡಿದು ಹೊಸ ಮನೆ ಹೊಸಿಲು ದಾಟಿದ ಮಹಿಳೆಗೂ ನೆಮ್ಮದಿಯಿಲ್ಲ. ಮನೆಗೆ ಬಂದ ಸೊಸೆಗೆ ಗ್ರಾಹಕರನ್ನು ಹುಡುಕುವ ಕೆಲಸ ಗಂಡನ ಮನೆಯವರದ್ದು.

ಹಗಲು ಮನೆ ನೋಡಿಕೊಳ್ಳುವ ಮಹಿಳೆ ರಾತ್ರಿಯಾದ್ರೆ ಗ್ರಾಹಕರ ಜೊತೆ ಮಲಗಬೇಕು. ರಾತ್ರಿ ಎರಡು ಗಂಟೆ ಸುಮಾರಿಗೆ ಮನೆ ಬಿಡುವ ಮಹಿಳೆ ಬೆಳಗಾಗುವವರೆಗೆ 3-4 ಗ್ರಾಹಕನ ಜೊತೆಗಿರುತ್ತಾಳೆ. ಮೊದಲೇ ಗ್ರಾಹಕರ ಬುಕ್ಕಿಂಗ್ ಆಗಿರುತ್ತದೆ. ಸಾಕಷ್ಟು ಭಾರಿ ಇದಕ್ಕೆ ವಿರೋಧ ವ್ಯಕ್ತವಾಗಿದೆ. ವೇಶ್ಯಾವಾಟಿಕೆ ನಡೆಸಲು ಒಲ್ಲೆ ಎಂದ ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡಿದ್ದಿದೆ. ತನ್ನ ಮಗಳಿಗೆ ವಿದ್ಯೆ ನೀಡಿ ಆಕೆಗೆ ಉತ್ತಮ ಭವಿಷ್ಯ ನೀಡಬೇಕೆಂಬ ಕನಸು ಅನೇಕ ತಾಯಂದಿರಿಗಿದೆ. ಆದ್ರೆ ಅದು ಈಡೇರುತ್ತಿಲ್ಲ. ‘ಭೇಟಿ ಬಚಾವೋ ಭೇಟಿ ಪಡಾವೋ’ ಯೋಜನೆಗಳು ಇಲ್ಲಿಯವರೆಗೆ ತಲುಪುತ್ತಿಲ್ಲ.

ಉದ್ಯಮಿ ದಂಡಪಾಣಿ ಅವರ ಮನೆ ಮೇಲೆ ಪೊಲೀಸರು ದಾಳಿ!?

ಚೆನ್ನೈ, -ಅವ್ಯವಹಾರ ಗಳ ಆರೋಪದ ಮೇಲೆ ಬಿಜೆಪಿ ಮುಖಂಡ ಮತ್ತು ಉದ್ಯಮಿ ದಂಡಪಾಣಿ ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಅಮಾನೀಕರಣ  ಗೊಂಡ 45 ಕೋಟಿ ರೂ. ನೋಟುಗಳು ಪತ್ತೆಯಾಗಿವೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಅಶೋಕ ನಗರ ಪೊಲೀಸರು ಚೆನ್ನೈ ಚೊಲೈ ಮೇಡುವಿನಲ್ಲಿರುವ ದಂಡ ಪ್ಪಾಣಿ ಮನೆ ಮೇಲೆ ಇಂದು ಬೆಳಗ್ಗೆ ದಾಳಿ ನಡೆಸಲಾಗಿದೆ. ಪರಿಶೀಲನೆ ನಡೆಸಿದಾಗ 500 ಮತ್ತು 1000 ರೂ. ಮುಖಬೆಲೆಯ 45 ಕೋಟಿ ರೂಪಾಯಿ ಹಳೇ ನೋಟುಗಳು ಪತ್ತೆಯಾದವು.

ರಾಮಲಿಂಗಂ ಅಂಡ್ ಕೋ ಸಂಸ್ಥೆಯ ಮಾಲೀಕರಾದ ದಂಡಪ್ಪಾಣಿ ಚೆನ್ನೈನ ಖ್ಯಾತ ವರ್ತಕರಾಗಿದ್ದಾರೆ. ಹಲವಾರು ವರ್ಷಗಳಿಂದ ಸಮವಸ್ತ್ರಗಳನ್ನು ಪೂರೈಸುವ ವಹಿವಾಟಿನಲ್ಲಿ ತೊಡಗಿದ್ದಾರೆ. ಪೊಲೀಸ್ ಇಲಾಖೆಗೆ ಅವರು ಇತ್ತೀಚೆಗೆ ಲಕ್ಷಾಂತರ ರೂ. ಮೌಲ್ಯದ ಸಮವಸ್ತ್ರಗಳನ್ನು ವಿತರಿಸಿದ್ದರು. ಇದರಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಮೇಲೆ ಇಂದು ಮುಂಜಾನೆ ಈ ದಾಳಿ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬಿಜೆಪಿಯ ನಾಯಕರೂ ಆಗಿರುವ ದಂಡಪ್ಪಾಣಿ ಪ್ರಭಾವಿ ವ್ಯಕ್ತಿಯಾಗಿದ್ದು, ಅವರ ವಹಿವಾಟು ಬಗ್ಗೆ ಪೊಲೀಸ್ ಇಲಾಖೆ ತನಿಖೆ ತೀವ್ರಗೊಳಿಸಿದೆ.

ರಾಷ್ಟ್ರಪತಿ ಹುದ್ದೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆ !?

ನವದೆಹಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆ ಯಾರಾಗಲಿದ್ದಾರೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಎ ಡೈಲಾಗ್ ವಿತ್ ಜೆಸಿ ಎಂಬ ಸುದ್ದಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಸಂದರ್ಶನ ನೀಡಿದಿರುವ ನಜ್ಮಾ ಹೆಫ್ತುಲ್ಲಾ, ಈ ಬಗ್ಗೆ ಹೇಳಿಕೆ ನೀಡಿದ್ದು, ರಾಷ್ಟ್ರಪತಿ ಹುದ್ದೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆ ಇಡೀ ವಿಶ್ವಕ್ಕೇ ಸಂದೇಶ ನೀಡಲಿದೆ ಎಂದು ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ವೈಖರಿಯನ್ನು ಮೆಚ್ಚಿಕೊಂಡಿರುವ ನಜ್ಮಾ ಹೆಫ್ತುಲ್ಲಾ, ಪ್ರಧಾನಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಧ್ಯೇಯ ತಮಗೆ ಅತ್ಯಂತ ಮೆಚ್ಚುಗೆಯಾಗಿದೆ ಎಂದಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ತ್ರಿವಳಿ ತಲಾಖ್ ಬಗ್ಗೆಯೂ ಮಾತನಾಡಿರುವ ತ್ರಿವಳಿ ತಲಾಖ್ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮ್ ಮಹಿಳೆಯರ ಪರವಾದ ನಿಲುವು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ತಮ್ಮನ್ನು ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಮಾಡುವುದರ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ರಾಷ್ಟ್ರಪತಿ ಚುನಾವಣೆಯ ಅವಕಾಶವನ್ನು ವ್ಯರ್ಥ ಮಾಡುವುದಿಲ್ಲ ಅವರ ಆಯ್ಕೆ ವಿಶ್ವಕ್ಕೆ ಸಂದೇಶ ನೀಡುವಂಥದ್ದಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಅಂತರಾಷ್ಟ್ರೀಯ ಕೋರ್ಟ್ ತಡೆ- ಭಾರತಕೆ ಜಯ

ಹೇಗ್: ಪಾಕಿಸ್ತಾನ ಸೇನಾ ಕೋರ್ಟ್ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ವಿಧಿಸಿರುವ ಗಲ್ಲು ಶಿಕ್ಷೆಗೆ ಗುರುವಾರ ಅಂತರಾಷ್ಟ್ರೀಯ ಕೋರ್ಟ್ ತಡೆಯಾಜ್ಞೆ ವಿಧಿಸಿದೆ. ಇದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ.
ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಭಾರತದ ಮನವಿಯನ್ನು ಎತ್ತಿಹಿಡಿದಿರುವ 11 ನ್ಯಾಯಮೂರ್ತಿಗಳನ್ನೊಳಗೊಂಡ ಅಂತರಾಷ್ಟ್ರೀಯ ಪೀಠ, ಅಂತಿಮ ತೀರ್ಪಿನವರೆಗೂ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ವಿಧಿಸಿದೆ.

ಕಳೆದ ಸೋಮವಾರ ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ತಮ್ಮ ವಾದ ಮಂಡಿಸಿದ್ದವು. ವಾದ-ಪ್ರತಿ ವಾದ ಆಲಿಸಿದ ಕೋರ್ಟ್ ಇಂದು ಅಂತಿಮ ತೀರ್ಪು ಪ್ರಕಟಿಸಿದೆ. 

ಕುಲಭೂಷಣ್ ಜಾಧವ್ ಜೀವಕ್ಕೆ ಅಪಾಯವಿದೆ ಎಂಬ ಭಾರತದ ವಾದವನ್ನು ಪುರಷ್ಕರಿಸಿದ ಕೋರ್ಟ್, ಅಂತಿಮ ತೀರ್ಪು ಬರುವವರೆಗೆ ಜಾಧವ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಹಾಗೂ ತೆಗೆದುಕೊಂಡಿರುವ ಎಲ್ಲಾ ಕ್ರಮಗಳ ಬಗ್ಗೆ ನಮಗೆ ಮಾಹಿತಿ ನೀಡಬೇಕು ಎಂದು ನ್ಯಾಯಮೂರ್ತಿ ರೋನಿ ಅಬ್ರಹಂ ಅವರು ಪಾಕಿಸ್ತಾನಕ್ಕೆ ಸೂಚಿಸಿದ್ದಾರೆ. ಅಲ್ಲದೆ ಜಾಧವ್ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ನೀಡುವಂತೆ ಪಾಕ್ ಗೆ ಆದೇಶಿಸಿದ್ದಾರೆ.

ಭಾರತದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, ವಿಚಾರಣೆ ಮುಗಿಯುವ ಮೊದಲೇ ಪಾಕಿಸ್ತಾನ ಕುಲಭೂಷಣ್ ಯಾದವ್ ರನ್ನು ಗಲ್ಲಿಗೇರಿಸುವ ಸಾಧ್ಯತೆಯೂ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಮಾತ್ರವಲ್ಲ ಪಾಕಿಸ್ತಾನ ವಿಯೆನ್ನಾ ಘೋಷಣೆಯನ್ನು ಉಲ್ಲಂಘಿಸಿದೆ. ಜಾಧವ್ ಸಂಪರ್ಕಿಸಲು ಭಾರತ 16 ಬಾರಿ ಪ್ರಯತ್ನಪಟ್ಟರೂ ಅವಕಾಶ ನೀಡಿಲ್ಲ. ಜತೆಗೆ ಅವರ ತಾಯಿ ಕೇಳಿದಾಗಲೂ ಭೇಟಿಗೆ ನಿರಾಕರಿಸಲಾಗಿದೆ. ಪರಿಸ್ಥಿತಿ ತೀರಾ ಕಳವಳಕಾರಿಯಾಗಿದೆ ಮತ್ತು ತುಂಬಾ ತುರ್ತಿನದಾಗಿದೆ ಎಂದು ಹೇಳಿದ್ದರು.

ಯಶಸ್ವಿ ಮೂರು ವರ್ಷ ಪೂರೈಸಿದ ನರೇಂದ್ರ ಮೋದಿ ಸರ್ಕಾರ..

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೇರಿ ಮೂರು ವರ್ಷಗಳಾಯಿತು. ಈ ಸಂದರ್ಭದಲ್ಲಿ ಲೋಕಲ್‍ಸರ್ಕಲ್ಸ್  ನಡೆಸಿದ ಸಮೀಕ್ಷೆಯಲ್ಲಿ  ಮೋದಿ ಸರ್ಕಾರದ ಬಗ್ಗೆ ಜನರ ಅಭಿಪ್ರಾಯ ವ್ಯಕ್ತವಾಗಿದೆ.
ಸಮೀಕ್ಷೆಯ ಪ್ರಕಾರ ಶೇ.61 ಜನರು ಮೋದಿ ತಮ್ಮ ನಿರೀಕ್ಷೆಗಳನ್ನು ಸಾಕಾರಗೊಳಿಸಿದ್ದಾರೆ ಎಂದಿದ್ದಾರೆ. ಅದೇ ವೇಳೆ ಶೇ.59 ರಷ್ಟು ಮಂದಿ ಮೋದಿ ಸರ್ಕಾರ ಚುನಾವಣಾ ಪೂರ್ವ ಭರವಸೆಗಳನ್ನು ಈಡೇರಿಸುವ ಹಾದಿಯಲ್ಲಿದೆ ಎಂದು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಮತ್ತು ಪ್ರಭಾವ ಹೆಚ್ಚಾಗಿದೆಯೇ ಎಂಬ ಪ್ರಶ್ನೆಗೆ  ಶೇ.81 ಮಂದಿ ಹೌದು ಎಂದು ಉತ್ತರಿಸಿದ್ದಾರೆ.

ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ಮೂಲಕ ಕಪ್ಪು ಹಣವನ್ನು ನಿಯಂತ್ರಿಸಲಾಗಿದೆ ಎಂಬ ಅಭಿಪ್ರಾಯಕ್ಕೆ ಶೇ. 51 ಜನರು ಹೌದು ಎಂದಿದ್ದಾರೆ. ಅದೇ ವೇಳೆ ಶೇ.37 ಮಂದಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡುವುದರಿಂದ ಭ್ರಷ್ಟಾಚಾರ ಕಡಿಮೆಯಾಗಿಲ್ಲ ಎಂದಿದ್ದಾರೆ.

ವಿದೇಶ ನೀತಿ, ಪಾಕಿಸ್ತಾನದೊಂದಿಗಿನ ಸಂಬಂಧ, ಜಾತೀಯತೆ, ಮೂಲ ಸೌಕರ್ಯಗಳ ಅಭಿವೃದ್ಧಿ ಹಾಗೂ ಸರ್ಕಾರದ ನೀತಿಗಳ ಬಗ್ಗೆ ಬಹುತೇಕ ಮಂದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಆನ್‍ಲೈನ್‍ನಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ದೇಶದ 200 ನಗರಗಳ 40.000ಕ್ಕಿಂತಲೂ ಹೆಚ್ಚು ಜನರು ಭಾಗಿಯಾಗಿದ್ದಾರೆ.
ಮೋದಿಯವರ ಸರ್ಕಾರ ಹೆಚ್ಚಿನ ಉದ್ಯೋಗವಕಾಶಗಳನ್ನು ಸೃಷ್ಟಿಸಿಲ್ಲ, ಹಣದುಬ್ಬರದಲ್ಲಿ ಸಮಸ್ಥಿತಿ ಕಾಯ್ದುಕೊಂಡಿಲ್ಲ, ಆರೋಗ್ಯ ವಲಯದಲ್ಲಿ ಸುಧಾರಣೆ ತಂದಿಲ್ಲ, ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಅಪರಾಧಗಳನ್ನು ತಡೆಯಲು ವಿಫಲವಾಗಿದೆ ಎಂದು ಜನರು ಟೀಕಿಸಿದ್ದಾರೆ.

ಸರ್ಕಾರದ ಯೋಜನೆಗಳ ಬಗ್ಗೆ ಸಮೀಕ್ಷೆ ಮೂಲಕ ಅಭಿಪ್ರಾಯ ಕೇಳಿದಾಗ ನೇರ ನಗದು ವರ್ಗಾವಣೆ ವ್ಯವಸ್ಥೆ(ಡಿಬಿಟಿ) ಬಗ್ಗೆ ಶೇ.57 ರಷ್ಟು ಜನರು ಮೆಚ್ಚುಗೆ ಸೂಚಿಸಿದ್ದು. ಮೇಕ್ ಇನ್ ಇಂಡಿಯಾ ಯೋಜನೆ ಬಗ್ಗೆ ಶೇ.8ರಷ್ಟು ಜನರು ಮಾತ್ರ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಮೋದಿಯವರ ಸ್ವಚ್ಛ ಭಾರತ ಅಭಿಯಾನವೂ ವಿಫಲವಾಗಿದೆ. ಈ ಅಭಿಯಾನದಿಂದ ತಮ್ಮ ನಗರ ಸ್ವಚ್ಛವಾಗಿದೆಯೇ ಎಂದು ಕೇಳಿದಾಗ ಶೇ. 57ರಷ್ಟು ಮಂದಿ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಮೋದಿ ಜೀ ಅವರ ಅಭಿವೃದ್ದಿ ಕಾರ್ಯ ಮೆಚ್ಚಿ ಸಾಫ್ಟ್ ವೆರ್ ವಿದೇಶದಿದ ತಾಯ್ನಾಡಿಗೆ..

ಬೆಂಗಳೂರು,ಮೇ 17-ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ದಿ ಕಾರ್ಯ ಮೆಚ್ಚಿ ಸಾಫ್ಟ್ ವೆರ್  ಇಂಜಿನಿಯರ್ ಒಬ್ಬರು ವಿದೇಶಿ ವ್ಯಾಮೋಹ ಅಮೆರಿಕದಿಂದ ತಾಯ್ನಾಡಿಗೆ ಮರಳಿದ್ದಾರೆ.  ತಮ್ಮ ಮುಂದಿನ ಜೀವನವನ್ನು ಭಾರತದ ಸೇವೆಗಾಗಿ ಮುಡುಪಾಗಿಡಲು ನಿರ್ಧರಿಸಿದ್ದೇನೆ. ಮಹಾಸಂಕಲ್ಪ ಸಂಘಟನೆ ಮೂಲಕ ಜನಸೇವೆ ದೀಕ್ಷೆ ಕೈಗೊಂಡು ದೇಶದ ಗ್ರಾಮಗಳ ಅಭಿವೃದ್ದಿ ಕಡೆ ಗಮನಹರಿಸುತ್ತೇನೆ ಎಂದು ಸಾಫ್ಟ್ ವೆರ್  ಇಂಜಿನಿಯರ್ ಚಂದ್ರಕಾಂತ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ...!


ನವದೆಹಲಿ: ಕಣಿವೆ ರಾಜ್ಯದಲ್ಲಿ ಹಿಂಸಾಚಾರ ವ್ಯಾಪಕವಾಗಿರುವ ಬೆನ್ನಲ್ಲೇ ಭಾರತೀಯ ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಹೇಳಲಾಗುತ್ತಿದೆ.
ಆಂಗ್ಲ ದೈನಿಕವೊಂದು ವರದಿ ಮಾಡಿರುವಂತೆ ಪ್ರಸ್ತುತ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತಣ್ಣಗಾಗಲು ಕೂಡಲೇ ರಾಷ್ಟ್ರಪತಿ ಆಡಳಿತ ಹೇರುವಂತೆ ಭಾರತೀಯ ಸೇನೆಯ ತಜ್ಞರು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು  ಮಾಡಿದ್ದಾರೆ ಎಂದು ವರದಿ ಮಾಡಲಾಗಿದೆ. ಪ್ರತ್ಯೇಕತಾವಾದಿಗಳ ಕುಮ್ಮಕ್ಕು ಹಾಗೂ ಉಗ್ರ ಸಂಘಟನೆಗಳ ನೆರವಿನಿಂದಾಗಿ ಅಶಾಂತಿಯಿಂದ ಹೊತ್ತಿ ಉರಿಯುತ್ತಿರುವ ಕಾಶ್ಮೀರದಲ್ಲಿ ಬಂಡುಕೋರ ಶಕ್ತಿಗಳನ್ನು ನಿಗ್ರಹಿಸಲು  ರಾಜ್ಯಪಾಲರ ಆಳ್ವಿಕೆ ಜಾರಿಗೊಳಿಸುವಂತೆ ಅನಿವಾರ್ಯವೆಂದು ಭದ್ರತಾ ಪಡೆಗಳು ಕೇಂದ್ರಕ್ಕೆ ಶಿಫಾರಸು ಮಾಡಿವೆ ಎನ್ನಲಾಗಿದೆ.

ಇನ್ನು ವರದಿಯಲ್ಲಿ ಕಾಶ್ಮೀರದಲ್ಲಿ ಈಗಷ್ಟೇ ಬೇಸಿಗೆ ಆರಂಭವಾಗಿರುವುದರಿಂದ ಉಗ್ರರ ಒಳನುಸುಳುವಿಕೆ ಪ್ರಮಾಣ ಹೆಚ್ಚಳವಾಗುವ ಸಂಭವವಿದೆ. ಇದೇ ಸಂದರ್ಭದಲ್ಲಿ ಆಂತರಿಕ ಹಿಂಸಾಚಾರವನ್ನು ಉಗ್ರರು ತಮ್ಮ ಕುಕೃತ್ಯಗಳಿಗೆ  ಬಳಸಿಕೊಳ್ಳುವ ಸಾಧ್ಯತೆ ಇದ್ದು, ಇದೇ ಕಾರಣಕ್ಕೆ ಭದ್ರತಾ ಪಡೆಗಳು ಕೇಂದ್ರ ಸರ್ಕಾರಕ್ಕೆ ಈ ಶಿಫಾರಸ್ಸು ಮಾಡಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಯಾದರೆ ಕಾಶ್ಮೀರದ ಒಟ್ಟಾರೆ  ಭದ್ರತಾ ಪರಿಸ್ಥಿತಿ ಸುಧಾರಿಸಬಹುದು ಎಂದೂ ಭದ್ರತಾ ಪಡೆಗಳು ವಾದಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪಿಡಿಪಿ-ಬಿಜೆಪಿ ಮೈತ್ರಿಯೇ ಹಿಂಸಾಚಾರಕ್ಕೆ ಕಾರಣ?
ವರದಿಯಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಪ್ರಸ್ತುತ ಕಾಶ್ಮೀರದಲ್ಲಿ ಉಂಟಾಗಿರುವ ಅಶಾಂತಿ ಪರಿಸ್ಥಿತಿಗೆ ಪಿಡಿಪಿ-ಬಿಜೆಪಿ ಮೈತ್ರಿಯೇ ಕಾರಣ ಎಂದು ಅಭಿಪ್ರಾಯಪಡಲಾಗಿದೆ. ಸೈದ್ಧಾಂತಿಕವಾಗಿ ವಿರುದ್ಧ ದಿಕ್ಕಿನಲ್ಲಿರುವ ಪಿಡಿಪಿ  ಹಾಗೂ ಬಿಜೆಪಿ ಮೈತ್ರಿಯೂ ಕಾಶ್ಮೀರಿಗಳ ಆಕ್ರೋಶಕ್ಕೆ ಕಾರಣ. ಒಂದು ವೇಳೆ ರಾಜ್ಯಪಾಲರ ಆಳ್ವಿಕೆ ಜಾರಿಯಾದರೆ ಈ ಒಂದು ಅಂಶ ಬೀರುವ ಪರಿಣಾಮವನ್ನು ತೊಡೆದು ಹಾಕಬಹುದು ಎಂದು ಭದ್ರತಾ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ. ಇದರ ಜತೆಗೆ ಕಲ್ಲು ತೂರಾಟ ನಡೆಸುವ ಪ್ರತಿಭಟನಾಕಾರರ ಕೆಲ ನಾಯಕರನ್ನು ಹೊರರಾಜ್ಯಗಳಿಗೆ ಸ್ಥಳಾಂತರಿಸಲು ಆಗದಿದ್ದರೆ, ಕಣಿವೆಯಿಂದಲಾದರೂ ಹೊರಕ್ಕೆ ಕಳುಹಿಸಬೇಕು ಎಂಬುದು ಭದ್ರತಾ ಪಡೆಗಳ  ಮತ್ತೊಂದು ಬೇಡಿಕೆಯಾಗಿದೆ ಎಂದು ಹೇಳಲಾಗಿದೆ.

ಆಡಳಿತಾರೂಢ ಪಿಡಿಪಿಯ ಭದ್ರಕೋಟೆಯಾಗಿರುವ ದಕ್ಷಿಣ ಕಾಶ್ಮೀರದಲ್ಲಿ ದೇಶಿ ಭಯೋತ್ಪಾದನೆ ಹೆಚ್ಚಾಗಿರುವುದು ಭದ್ರತಾ ಪಡೆಗಳ ಕಳವಳಕ್ಕೆ ಕಾರಣ. ಉಗ್ರರು ಭದ್ರತಾ ಸಿಬ್ಬಂದಿ ಶಸ್ತ್ರಾಸ್ತ್ರ ಕಿತ್ತು ಕೊಳ್ಳುವುದು ಇಲ್ಲಿ  ಸಾಮಾನ್ಯವಾಗಿಬಿಟ್ಟಿದೆ.  ಹೀಗಾಗಿ ರಾಜ್ಯಪಾಲರ ಆಳ್ವಿಕೆಗೆ ಭದ್ರತಾ ಪಡೆಗಳು ಕೋರಿಕೆ ಇಟ್ಟಿವೆ ಎನ್ನಲಾಗುತ್ತಿದೆ.

ಕೇಂದ್ರಾಡಳಿತ ಕಾಶ್ಮೀರದಲ್ಲಿ ಸಾಂವಿಧಾನಿಕ ವ್ಯವಸ್ಥೆ ಕುಸಿದು ಬಿದ್ದರೆ ಆರು ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆ ಹೇರಬಹುದಾಗಿದೆ. ಅದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಬೇಕು.

ಅಮ್ಮನ ನಿವಾಸ ಪೋಯಸ್ ಗಾರ್ಡನ್‍ನಲ್ಲಿ ಯಾರೋ ಅಳುವ ಗೋಳಿಡುವ ಸದ್ದು...?

ಚೆನ್ನೈ, ಮೇ 14-ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಸಾವಿನ ನಂತರ ಅವರ ಆತ್ಮ ತನ್ನ ನಿವಾಸ ಸುತ್ತ ಅಲೆದಾಡುತ್ತಿದೆ ಎಂಬ ಹಲವು ವದಂತಿಗಳು ಹರಡುತ್ತಿದ್ದು , ಅದಕ್ಕೆ ಪುಷ್ಟಿ ನೀಡುವಂತೆ ಹಲವು ದಿನಗಳಿಂದ ಅಮ್ಮನ ನಿವಾಸ ಪೋಯಸ್ ಗಾರ್ಡನ್‍ನಲ್ಲಿ ಯಾರೋ ಅಳುವ, ಗೋಳಿಡುವ ಸದ್ದು ಕೇಳಿಬರುತ್ತಲೇ ಇದೆಯಂತೆ. ಅಷ್ಟೇ ಅಲ್ಲದೆ ಜಯಲಲಿತಾ ಅವರ ಸಮಾಧಿ ಸ್ಥಳವಾದ ಮರೀನಾ ಬೀಚ್‍ನಲ್ಲೂ ಅಂಥದೊಂದು ಅಳು ಕೇಳಿಬರುತ್ತಿದ್ದು , ಸಮಾಧಿ ಕಾವಲಿಗಿರುವ ಸೆಕ್ಯುರಿಟಿಗಳು ಕೂಡ ಅಮ್ಮನ ಆತ್ಮವಿದೆ ಎಂದೇ ಹೇಳುತ್ತಿದ್ದಾರೆಯತೆ. ಸಮಾಧಿ ಸ್ಥಳದಲ್ಲಿ ಇದುವರೆಗೂ 20 ಭದ್ರತಾ ಸಿಬ್ಬಂದಿಗಳು ಬದಲಾಗಿದ್ದು, ಯಾರೊಬ್ಬರೂ ಇಲ್ಲಿ ಕಾವಲು ನಿರ್ವಹಿಸಲು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ತಮಿಳುನಾಡಿನ್ಯಾದಂತ ಕೋಪೋದ್ರಿಕ್ತ ಭೂತ( ಆತ್ಮ)ದ ಬಗ್ಗೆ ಭಾರೀ ಗುಸುಗುಸು, ಚರ್ಚೆಗಳು ನಡೆಯುತ್ತಿವೆ.

ಜಯ ಲಲಿತಾ ಅವರ ಸಾವಿನ ನಂತರ ನಡೆದ ಅನೇಕ ಘಟನೆಗಳಿಗೂ ಅಮ್ಮನ ಕೋಪೋದ್ರಿಕ್ತ ಆತ್ಮದ ಅಲೆದಾಟವೇ ಕಾರಣವೇ…? ಯಾಕೆಂದರೆ ಅಮ್ಮ ವಾಸವಿದ್ದ ಪೊಯೆಸ್ ಗಾರ್ಡನ್‍ನಲ್ಲಿ ಯಾರೋ ಅಳುವ ಶಬ್ದ, ಊಟಿಯ ಕೊಡನಾಡು ಎಸ್ಟೇಟ್‍ನಲ್ಲಿ ಕಾವಲುಗಾರ ಭರತ್ ಸಿಂಗ್ ಕೊಲೆ, ದರೋಡೆ ಪ್ರಕರಣದ ಪ್ರಮುಖ ಆರೋಪಿ ಅಪಘಾತದಲ್ಲಿ ಸಾವನ್ನಪ್ಪಿದ್ದು , ಸಚಿವರೊಬ್ಬರ ಆಪ್ತರೊಬ್ಬರ ನಿಗೂಢ ಸಾವು ಈ ಎಲ್ಲದರ ಹಿಂದೆ ಜಯಲಲಿತಾರ ಅತೃಪ್ತ ಆತ್ಮದ ಕೈವಾಡವಿದೆ ಎಂದು ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಇದೇ ವೇಳೆ ಜಯಾರ ಬಂಗಲೆಯಲ್ಲಿ ಅಡುಗೆ ಭಟ್ಟನಾಗಿದ್ದ ಪಾಂಚಾಲೈ ಮೇಲೆ ಅಪರಿಚಿತ ದುಷ್ಕರ್ಮಿಗಳು ತೀವ್ರ ಹಲ್ಲೆ ನಡೆಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಯಾ ಬಂಗಲೆ ಮತ್ತು ಎಸ್ಟೇಟ್ ಸಿಬ್ಬಂದಿ ಮೇಲೆ ಏಕೆ ಇಂಥ ಘಟನೆಗಳು ಮರುಕಳಿಸುತ್ತಿವೆ ಎಂಬುದು ಕಗ್ಗಂಟಿನ ಪ್ರಶ್ನೆಯಾಗಿದೆ.

ರಾಜಕೀಯದಲ್ಲಿ ಸುದೀರ್ಘ ನೆಲೆಕಂಡು ತಮಿಳಿಗರ ಪಾಲಿಗೆ ಅಮ್ಮನೇ ಎಂದು ಭಾವನಾತ್ಮಕ ಸಂಬಂಧ ಹೊಂದಿರುವ ಜಯಲಲಿತಾ ಅವರ ಸಾವು ಅಸಹಜ ಎಂದು ಹೇಳಲಾಗುತ್ತಿದ್ದು , ಅದು ನಿಜವೇ ಆದರೆ ಅತೃಪ್ತ ಆತ್ಮವಾಗಿ ಕಾಡುವುದು ಸಹಜ ಎಂದು ಹಲವು ಜ್ಯೋತಿಷಿಗಳು ಹೇಳುತ್ತಿದ್ದಾರೆ.

ಬಹುದೊಡ್ಡ ದಾಳಿ ನಡೆಸಿ ತಂದೆ ಸಾವಿನ ಸೇಡು  ತೀರಿಸಿಕೊಳ್ಳಲು ಹೊಂಚು ಹಾಕಿದ್ದಾನೆ- ಅಮೆರಿಕದ FBI ತನಿಖಾ ಸಂಸ್ಥೆ ಮಾಹಿತಿ ನೀಡಿದೆ

ಪಾಕಿಸ್ತಾನದ ಅಬೋಟಾಬಾದ್ ನಲ್ಲಿರುವ ಲಾಡೆನ್ ನಿವಾಸದ ಮೇಲೆ ಅಮೆರಿಕದ ನೇವಿ ಸೀಲ್ ಪಡೆ ದಾಳಿ ಮಾಡಿದ್ದ ಸಂದರ್ಭದಲ್ಲಿ ಲಭ್ಯವಾದ ದಾಖಲೆಗಳ ಅನ್ವಯ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಕೂಡ ಉಗ್ರ  ಸಂಘಟೆನೆಯಲ್ಲಿ ತೊಡಗಿಕೊಂಡಿದ್ದ. ತನ್ನ ತಂದೆ ಸಾವಿನ ಸೇಡಿಗಾಗಿ ಹಮ್ಜಾ ಬಿನ್ ಲಾಡೆನ್ ಕಾದಿದ್ದು, ಇದೀಗ ಬಹುದೊಡ್ಡ ಅಲ್ ಖೈದಾ ಉಗ್ರ ಸಂಘಟನೆ ಕಟ್ಟಿ ಅದರ ಮೂಲಕ ಬಹುದೊಡ್ಡ ದಾಳಿ ನಡೆಸಿ ತಂದೆ ಸಾವಿನ ಸೇಡು  ತೀರಿಸಿಕೊಳ್ಳಲು ಹೊಂಚು ಹಾಕಿದ್ದಾನೆ ಎಂದು ತಿಳಿದುಬಂದಿದೆ.

ಈ ಬಗ್ಗ ಸ್ವತಃ ಅಮೆರಿಕದ ತನಿಖಾ ಸಂಸ್ಥೆ ಎಫ್ ಬಿಐ ಏಜೆಂಟ್ ಅಲಿ ಸೌಫಾನ್ ಅವರು ಮಾಹಿತಿ ನೀಡಿದ್ದು, ಈ ಹಿಂದೆಂದಿಗಿಂತಲೂ ಅತೀ ದೊಡ್ಡ ಪ್ರಮಾಣದಲ್ಲಿ ಉಗ್ರ ಸಂಘಟನೆ ಕಟ್ಟಲು ಹಮ್ಜಾ ಬಿನ್ ಲಾಡೆನ್ ಮುಂದಾಗಿದ್ದು, ತನ್ನ  ತಂದೆ ಕಾಲದಲ್ಲಿದ್ದ ಸಂಘಟನೆಗಿಂತಲೂ ಬಲಿಷ್ಠ ಮತ್ತು ದೊಡ್ಡ ಗಾತ್ರದ ಸಂಘಟನೆಯ ನಾಯಕತ್ವ ವಹಿಸಲು ತುದಿಗಾಲಲ್ಲಿ ನಿಂತಿದ್ದಾನೆ ಎಂದು ಹೇಳಿದ್ದಾರೆ. 2001 ಸೆಪ್ಟೆಂಬರ್ 11ರ ದಾಳಿ ಬಳಿಕ ಉಗ್ರ ಸಂಘಟನೆಗಳ ಕುರಿತು  ತನಿಖೆ ನಡೆಸುತ್ತಿರುವ ಎಫ್ ಬಿಐ ಏಜೆಂಟ್ ಅಲಿ ಸೌಫಾನ್ ಸಿಬಿಎಸ್ ಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಹಮ್ಜಾ ಬಿನ್ ಲಾಡೆನ್ ನ ವಯಸ್ಸು ಪ್ರಸ್ತುತ 28 ವರ್ಷಗಳಾಗಿದ್ದು, ಆತನ ತಂದೆ ಬಿನ್ ಲಾಡೆನ್ ಸತ್ತ ಸಂದರ್ಭದಲ್ಲಿ ಆತನ ವಯಸ್ಸು 22 ವರ್ಷ ಆಗಿತ್ತು ಎಂದು ಹೇಳಿದ್ದಾರೆ. ಕಳೆದ 2 ವರ್ಷಗಳಲ್ಲಿ ಹಮ್ಜಾ ಬಿನ್ ಲಾಡೆನ್ 2 ಆಡಿಯೋ  ಟೇಪ್ ಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ತಮ್ಮ ತಂದೆ ಹಾಕಿಕೊಟ್ಟ ಜಿಹಾದ್ ಮಾರ್ಗದಲ್ಲೇ ನಡೆಯುವುದು ಆತನ ಗುರಿಯಾಗಿದೆ ಎಂದು ಹೇಳಿಕೊಂಡಿದ್ದಾನೆ. ಅಂತೆಯೇ ಮತ್ತೊಂದು ಟೇಪ್ ನಲ್ಲಿ ಅಮೆರಿಕ ಪ್ರಜೆಗಳೇ ನಾವು  ಬರುತ್ತಿದ್ದೇವೆ. ನಮ್ಮ ಬರುವಿಕೆ ನಿಮಗೆ ಖಂಡಿತಾ ಅನುಭವವಾಗುತ್ತದೆ. ನಮ್ಮ ತಂದೆ ಸಾವಿಗೆ ಖಂಡಿತಾ ಸೇಡು ತೀರಿಸಿಕೊಳ್ಳುತ್ತೇವೆ. ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ನೀವು ನಡೆಸುತ್ತಿರುವ ದೌರ್ಜನ್ಯಕ್ಕೆ ಖಂಡಿತಾ  ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಹೇಳಿದ್ದ ಎಂದು ಏಜೆಂಟ್ ತಿಳಿಸಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಭೂಗತ ಪಾತಕಿ ಹಾಜಿ ಮಸ್ತಾನ್ ಪುತ್ರ ಎಚ್ಚರಿಕೆ  ನೀಡಿದ್ದಾನೆ.

ಭೂಗತ ಪಾತಕಿ ಹಾಜಿ ಮಸ್ತಾನ್ ಕುರಿತ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ನಟಿಸುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದು, ಇದರ ಬೆನ್ನಲ್ಲೇ ಹಾಜಿ ಮಸ್ತಾನ್ ಅವರ ಪುತ್ರ ಎಂದು ಹೇಳಿಕೊಳ್ಳುತ್ತಿರುವ  ಸುಂದರ್ ಎಂಬುವವರು ರಜನಿಕಾಂತ್ ಅವರಿಗೆ ನೋಟಿಸ್ ನೀಡಿದ್ದಾರೆ. ನೋಟಿಸ್ ನಲ್ಲಿ ತಮ್ಮ ತಂದೆಯ ಗೌರವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಅವರನ್ನು ಕೆಟ್ಟದಾಗಿ ಬಿಂಬಿಸಿದರೆ ನಿಮ್ಮ ವಿರುದ್ಧ ಕಾನೂನಾತ್ಮಕ ಕ್ರಮ  ಕೈಗೊಳ್ಳಬೇಕಾಗುತ್ತದೆ. ಒಂದು ರಾಷ್ಟ್ರೀಯ ಪಕ್ಷ ಅವರನ್ನು ಓರ್ವ ನಾಯಕನಾಗಿ ಗುರುತಿಸಿದ್ದು, ಲಕ್ಷಾಂತರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಅವರನ್ನು ಗೌರವದಿಂದ ಕಾಣುತ್ತಾರೆ. ಇದೀಗ ನಿಮ್ಮ ಚಿತ್ರದಲ್ಲಿ ಅವರನ್ನು  ಕೆಟ್ಟದಾಗಿ ಬಿಂಬಿಸುತ್ತಿರುವ ವಿಚಾರದಿಂದಾಗಿ ಅವರ ಆಕ್ರೋಶಗೊಂಡಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.

ನೋಟಿಸ್ ನಲ್ಲಿ "ನನ್ನ ತಂದೆಯ ಜೀವನಾಧರಿತ ಚಿತ್ರದಲ್ಲಿ ನೀವು ನಟಿಸುತ್ತಿದ್ದು, ಓರ್ವ ರಾಷ್ಟ್ರೀಯ ರಾಜಕಾರಣಿಯನ್ನು ಭೂಗತ ಪಾತಕಿ ಎಂಬಂತೆ ಬಿಂಬಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ. ಇದು ನಿಜಕ್ಕೂ ಅಕ್ಷಮ್ಯ.  ಹೀಗಾಗಿ ನಿಮ್ಮ ಚಿತ್ರದಲ್ಲಿ ನನ್ನ ತಂದೆಯವರನ್ನು ಕೆಟ್ಟದಾಗಿ ತೋರಿಸಿದರೆ ಅಥವಾ ಗೌರವಕ್ಕೆ ಚ್ಯುತಿ ಬರುವಂತೆ ಮಾಡಿದ್ದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸುಂದರ್ ನೋಟಿಸ್ ನಲ್ಲಿ ಹೇಳಿದ್ದಾರೆ.

ಕಬಾಲಿ ಖ್ಯಾತಿಯ ಪಾ ರಂಜಿತ್ ತಮ್ಮ ಮುಂದಿನ ಚಿತ್ರವಾಗಿ ಭೂಗತ ಪಾತಕಿ ಹಾಜಿ ಮಸ್ತಾನ್ ಅವರ ಜೀವನಾಧಾರಿತ ಚಿತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಚಿತ್ರದಲ್ಲಿ ರಜನಿಕಾಂತ್ ಅವರು ಹಾಜಿ ಮಸ್ತಾನ್  ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 1924ರಿಂದ 1994ರವರೆಗೂ ಜೀವಿಸಿದ್ದ ಹಾಜಿ ಮಸ್ತಾನ್ ಅವರ ಜೀವನದಲ್ಲಿ ನಡೆದ ಪ್ರಮುಖ ಘಟನಾವಳಿಗಳನ್ನು ಆಧರಿಸಿ ಚಿತ್ರ ಮಾಡಲಾಗುತ್ತಿದೆ ಎಂದು  ಹೇಳಲಾಗುತ್ತಿದೆ

Featured Post

ಪ್ರಿಯಾಂಕ ಗಾಂಧಿಗೆ ಕರ್ನಾಟಕ ಚುನಾವಣಾ ಜವಾಬ್ದಾರಿ...!

ಮುಂದಿನ ವರ್ಷ ಕರ್ನಾಟಕ, ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದ್ದು, ಈ ಎರಡು ರಾಜ್ಯಗಳ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಮಹತ್ವವಾಗಿದೆ. ಚುನಾವಣೆಯಲ್ಲಿ ಗೆಲುವು ಪಡೆಯುವ ದೃ...